ರಾಯಚೂರು: ಚಾಕುವಿನಿಂದ ಇರಿದು ಮಹಿಳೆಯ ಬರ್ಬರ ಹತ್ಯೆ

ಮಹಿಳೆಯೊಬ್ಬರನ್ನು ಆಕೆಯ ಸಂಬಂಧಿಯೇ ಚಾಕುವಿನಿಂದ ಇರಿದು ಬರ್ಬರ ಹತ್ಯೆ ಮಾಡಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
ರಾಯಚೂರು: ಚಾಕುವಿನಿಂದ ಇರಿದು ಮಹಿಳೆಯ ಬರ್ಬರ ಹತ್ಯೆ
Updated on

ರಾಯಚೂರು: ಮಹಿಳೆಯೊಬ್ಬರನ್ನು ಆಕೆಯ ಸಂಬಂಧಿಯೇ ಚಾಕುವಿನಿಂದ ಇರಿದು ಬರ್ಬರ ಹತ್ಯೆ ಮಾಡಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.

ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕಿನ ಮುದಗಲ್ ಪೇಟೆಯ ವೆಂಕಟರಾಯನಪೇಟೆ ಬಡಾವಣೆಯಲ್ಲಿ ಘಟನೆ ನಡೆದಿದ್ದು ಮೃತಳನ್ನು ನೇತ್ರಾವತಿ (33) ಎಂದು ಗುರುತಿಸಲಾಗಿದೆ.

ನೇತ್ರಾವತಿಯ ಸಂಬಂಧಿಯಾದ ಶಿವರಾಜ ಎಂಬಾತನೇ ಮಹಿಳೆಯ ಹತ್ಯೆ ಮಾಡಿದ್ದು ತಿಳಿದುಬಂದಿದೆ. ಕೃತ್ಯ ನಡೆಸಿದ ಆರೋಪಿ ಸಧ್ಯ ಪರಾರಿಯಾಗಿದ್ದಾನೆ.

ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. 

<strong>ನೇತ್ರಾವತಿ</strong>
ನೇತ್ರಾವತಿ

ಸ್ಥಳಕ್ಕೆ ಮುದಗಲ್ ಪೋಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಶಿವರಾಜನಿಗಾಗಿ ಶೋಧ ನಡೆದಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com