ಕ್ರೇನ್ ಹರಿದು ರಸ್ತೆಬದಿ ಕುಳಿತ ಇಬ್ಬರ ದುರ್ಮರಣ: ಚಾಲಕನಿಗೆ ಸಾರ್ವಜನಿಕರಿಂದ ಥಳಿತ!

ರಸ್ತೆಬದಿ ಕುಳಿತ ವೃದ್ಧರಿಬ್ಬರ ಮೇಲೆ ಕ್ರೇನ್ ಹರಿದು ಸ್ಥಳದಲ್ಲೇ ಅವರಿಬ್ಬರೂ ಮೃತಪಟ್ಟಿರುವ ಘಟನೆ ಕೊಳ್ಳೇಗಾಲದ ಹೊಸ ಹಂಪಾಪುರದಲ್ಲಿ ನಡೆದಿದೆ.
ವ್ಡದ್ದ ಸಾವಿಗೆ ಕಾರಣವಾದ ಕ್ರೇನ್
ವ್ಡದ್ದ ಸಾವಿಗೆ ಕಾರಣವಾದ ಕ್ರೇನ್
Updated on

ಚಾಮರಾಜನಗರ: ರಸ್ತೆಬದಿ ಕುಳಿತ ವೃದ್ಧರಿಬ್ಬರ ಮೇಲೆ ಕ್ರೇನ್ ಹರಿದು ಸ್ಥಳದಲ್ಲೇ ಅವರಿಬ್ಬರೂ ಮೃತಪಟ್ಟಿರುವ ಘಟನೆ ಕೊಳ್ಳೇಗಾಲದ ಹೊಸ ಹಂಪಾಪುರದಲ್ಲಿ ನಡೆದಿದೆ.

ಹೊಸಹಂಪಾಪುರ ಗ್ರಾಮದ ನಿಂಗರಾಜು(70) ಮತ್ತು ಸಿದ್ಧಯ್ಯ(80) ಮೃತ ದುರ್ದೈವಿಗಳು.

ಕೊಳ್ಳೇಗಾಲದಿಂದ ಮುಳ್ಳೂರಿಗೆ ಕ್ರೇನ್ ತೆರಳುವಾಗ ರಸ್ತೆಬದಿ ವೃದ್ಧರು ಕುಳಿತಿರುವುದು ಕಾಣದೇ ಚಾಲಕ ವೃದ್ಧರ ಮೇಲೆಯೇ ಕ್ರೇನ್​​ ಹರಿಸಿದ್ದಾನೆ. 

ಚೀರಾಟ ಕಂಡು ಪರಾರಿಯಾಗುತ್ತಿದ್ದ ಚಾಲಕ ಆರ್ಮುಗಂ ಎಂಬಾತನನ್ನ ಸಾರ್ವಜನಿಕರೇ ಹಿಡಿದು ಥಳಿಸಿ ಪೊಲೀಸರಿಗೊಪ್ಪಿಸಿದ್ದಾರೆ. ಕೊಳ್ಳೇಗಾಲ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ: ಗುಳಿಪುರ ನಂದೀಶ ಎಂ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com