ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹೆಚ್ ಡಿ ಕೋಟೆ : ಕೆರೆಯಲ್ಲಿ ಈಜಲು ಹೋದ 4 ಬಾಲಕರು ನೀರು ಪಾಲು

ಕೆರೆಗೆ ಈಜಲು ಹೋದ ನಾಲ್ವರು ಬಾಲಕರು ನೀರು ಪಾಲಾದ ವಿದ್ರಾವಕ ಘಟನೆ  ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆಯಲ್ಲಿ ನಡೆದಿದೆ. 
Published on

ಮೈಸೂರು: ಕೆರೆಗೆ ಈಜಲು ಹೋದ ನಾಲ್ವರು ಬಾಲಕರು ನೀರು ಪಾಲಾದ ವಿದ್ರಾವಕ ಘಟನೆ  ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆಯಲ್ಲಿ ನಡೆದಿದೆ. 

ಇಂದು ಶಿವರಾತ್ರಿ ಹಿನ್ನೆಲೆಯಲ್ಲಿ ಶಾಲೆಗೆ ರಜೆ ಇದ್ದ ಕಾರಣ ನಾಲ್ವರು ಸ್ನೇಹಿತರು ಹೆಚ್. ಡಿ. ಕೋಟೆಯ ಮಲ್ಬಾರ್ ಕೆರೆಯಲ್ಲಿ ಈಜಲು ಹೋಗಿದ್ದರು. ಕೆರೆಯ ಆಳದ ನೀರಿಗೆ ನಾಲ್ವರು ಯುವಕರು ಇಳಿದಾಗ ನೀರಿನ ಪ್ರಭಾವಕ್ಕೆ ಸಿಲುಕಿ ಮುಳುಗಿ ಸಾವನ್ನಪ್ಪಿದ್ದಾರೆ. ಮೃತ ಬಾಲಕರನ್ನು ಕಿರಣ್, ಕೆಂಡ, ರೋಹಿತ್, ಯಶವಂತ‌ ಎಂದು ಗುರುತಿಸಲಾಗಿದೆ.

ಕೆರೆ ಏರಿ ಮೇಲೆ ಬಾಲಕರ ಬಟ್ಟೆ ಹಾಗೂ ಸೈಕಲ್​​​​ ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಅನುಮಾನಗೊಂಡ ಗ್ರಾಮಸ್ಥರಿಂದ ಕೆರೆಯಲ್ಲಿ ಹುಡುಕಾಟ ನಡೆಸಲಾಗಿದ್ದು, ನಾಲ್ವರ ಮೃತದೇಹಗಳನ್ನೂ ಪತ್ತೆಮಾಡಲಾಗಿದೆ. ಘಟನೆ ಸಂಬಂಧ ಹೆಚ್.ಡಿ. ಕೋಟೆ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com