ಸಿಎಎ ಪರ ರ್ಯಾಲಿ: ಕೋಲಾರದಲ್ಲಿ ಪೋಲೀಸರಿಂದ ಲಾಠಿ ಚಾರ್ಜ್
ಕೋಲಾರ: ಪೂರ್ವಾನುಮತಿ ಇಲ್ಲದೆ ಸಿಎಎ ಪರ ರ್ಯಾಲ, ಮೆರವಣಿಗೆ ನಡೆಸಿದ್ದ ಬಿಜೆಪಿ ಮತ್ತು ಹಿಂದೂ ಪರ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರದ ಎಸ್ಎನ್ಆರ್ ಸರ್ಕಲ್ ಬಳಿ ಪೋಲೀಸರು ಮೆರವಣಿಗೆ ನಡೆಸುತ್ತಿದ್ದವರ ಮೇಲೆ ಲಾಠಿ ಬೀಸಿದ್ದಾರೆ.
ಕೋಲಾರ ಸಂಸದ ಎಸ್ ಮುನಿಸ್ವಾಮಿ ಸಿಎಎ ಪರ ರ್ಯಾಲಿಯನ್ನು ಆಯೋಜಿಸಿದ್ದರು. ಈ ವೇಳೆ ಎಲ್ಲಾ ತಾಲೂಕು ಮುಖಂಡರನ್ನು ಶನಿವಾರ ಕೋಲಾರದಲ್ಲಿ ಒಂದಾಗಿ ಸೇರಲು ಕೇಳಲಾಗಿತ್ತು. ಲಿಯಲ್ಲಿ ಭಾಗವಹಿಸಲು ಪಕ್ಷದ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೂಡ ಕೋಲಾರವನ್ನು ತಲುಪಿದ್ದರು
ಈ ಮಧ್ಯೆ, ಎಸ್ಎನ್ಆರ್ ಆಸ್ಪತ್ರೆ ವೃತ್ತದ ಬಳಿ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಪಕ್ಷದ ಬೆಂಬಲಿಗರು ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಅವರ ಎಚ್ಚರಿಕೆಗಳ ಹೊರತಾಗಿಯೂ ಪೊಲೀಸ್ ಬ್ಯಾರಿಕೇಡ್ಗಳನ್ನು ದಾಟಲು ಪ್ರಯತ್ನಿಸಿದರು.
ಆಗ ಕಾರ್ಯಕರ್ತರು ಬಲಪ್ರಯೋಗದಿಂದ ಮುನ್ನಡೆಯುತ್ತಿದ್ದಾಗ ಪೊಲೀಸರು ಲಾಠಿಚಾರ್ಜ್ ಂಆಡಿದ್ದಾರೆ. ಈ ವೇಳೆ ಹಲವರು ಕಾಲಿಗೆ ಬುದ್ದಿ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ