ಮಂಗಳಮುಖಿಯರಿಂದ ನಿರ್ವಾಹಕನ ಮೇಲೆ ಹಲ್ಲೆ

ತಾಲೂಕಿನ ಮರಳಿ ಟೋಲ್​​ಗೇಟ್​​ಗೆ ಟಿಕೆಟ್ ತೆಗಸುವ ವಿಚಾರಕ್ಕೆ  ಮಂಗಳಮುಖಿಯರು ಹಾಗೂ ಕಂಡಕ್ಟರ್​ ನಡುವೆ ಗಲಾಟೆ ನಡೆದಿರುವ ಘಟನೆ ಜಿಲ್ಲೆಯ ಜುಲಾಯಿ ನಗರದಲ್ಲಿ ನಡೆದಿದೆ.
ಹಲ್ಲೆಗೊಳಗಾದ ಕಂಡಕ್ಟರ್
ಹಲ್ಲೆಗೊಳಗಾದ ಕಂಡಕ್ಟರ್

ಗಂಗಾವತಿ: ತಾಲೂಕಿನ ಮರಳಿ ಟೋಲ್​​ಗೇಟ್​​ಗೆ ಟಿಕೆಟ್ ತೆಗಸುವ ವಿಚಾರಕ್ಕೆ  ಮಂಗಳಮುಖಿಯರು ಹಾಗೂ ಕಂಡಕ್ಟರ್​ ನಡುವೆ ಗಲಾಟೆ ನಡೆದಿರುವ ಘಟನೆ ಜಿಲ್ಲೆಯ ಜುಲಾಯಿ ನಗರದಲ್ಲಿ ನಡೆದಿದೆ.

ಗಲಾಟೆಯಲ್ಲಿ ಶಿವಮೊಗ್ಗ ಡಿಪೋದ ಕಂಡಕ್ಟರ್ ದಾದೇಸಾಬ್​​ನನ್ನು ಮಂಗಳಮುಖಿಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಶಿವಮೊಗ್ಗದಿಂದ ರಾಯಚೂರಿಗೆ ಹೊರಟಿದ್ದ ಬಸ್​​ನಲ್ಲಿ ಜುಲಾಯಿ ನಗರದಲ್ಲಿ ಮಂಗಳಮುಖಿಯರು ಹತ್ತಿದ್ದಾರೆ‌. ಅಲ್ಲಿಂದ‌ ಮರಳಿಗೆ ಟಿಕೆಟ್ ಕೊಡುವಂತೆ ಕೇಳಿದ್ದಾರೆ. 

ಮರಳಿಗೆ  ಬಸ್​​ಸ್ಟಾಪ್ ಇಲ್ಲ. ಸಿದ್ದಾಪುರ ಟಿಕೆಟ್ ಕೊಡ್ತೀನಿ ಅಂತ ಕಂಡಕ್ಟರ್ ದಾದೇಸಾಬ್ ಹೇಳಿದ್ದಾರೆ. ಇದರಿಂದ ನಮಗೆ ಮರಳಿ ಟೋಲ್ ಗೇಟ್​ಗೆ ಟಿಕೆಟ್ ಕೊಡಲೇಬೇಕು ಎಂದು ಮಂಗಳಮುಖಿಯರು ಪಟ್ಟು ಹಿಡಿದಿದ್ದಾರೆ. ಟಿಕೆಟ್ ನೀಡಲು ನಿರಾಕರಿಸಿದ್ದರಿಂದ ಕಂಡಕ್ಟರ್ ಮುಖಕ್ಕೆ ರಕ್ತ ಬರುವ ಹಾಗೆ ಮಂಗಳಮುಖಿಯರು ಥಳಿಸಿದ್ದಾರೆ ಎನ್ನಲಾಗಿದ್ದು, ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com