ಉದ್ಯೋಗ ಕಳೆದುಕೊಳ್ಳುವ ಭೀತಿ; ಪತ್ನಿ, ಮಗಳಿಗೆ ವಿಷ ನೀಡಿ ಪತಿ ಆತ್ಮಹತ್ಯೆ

ಪತ್ನಿ, ಮಗಳಿಗೆ ವಿಷ ನೀಡಿ ಬಳಿಕ‌ ಪತಿಯೂ ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆಯೊಂದು ನಗರದ ಕವಳಿಕಾಯಿ‌ ಚಾಳದಲ್ಲಿ ಶನಿವಾರ ನಡೆದಿದೆ.
ಆತ್ಮಹತ್ಯೆ
ಆತ್ಮಹತ್ಯೆ
Updated on

ಧಾರವಾಡ: ಪತ್ನಿ, ಮಗಳಿಗೆ ವಿಷ ನೀಡಿ ಬಳಿಕ‌ ಪತಿಯೂ ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆಯೊಂದು ನಗರದ ಕವಳಿಕಾಯಿ‌ ಚಾಳದಲ್ಲಿ ಶನಿವಾರ ನಡೆದಿದೆ.

ಮೃತರನ್ನು ಪತಿ ಮೌನೇಶ್ ಪತ್ತಾರ (36 ವರ್ಷ), ಪತ್ನಿ ಅರ್ಪಿತಾ (28 ವರ್ಷ), ಮಗಳು ಸುಕೃತಾ (4 ವರ್ಷ) ಎಂದು ಗುರುತಿಸಲಾಗಿದೆ. ಪತ್ನಿ ಅರ್ಪಿತಾ , ಮಗಳು ಸುಕೃತಾಗೆ ವಿಷ ನೀಡಿ ಬಳಿಕ ಮೌನೇಶ್, ತಾವೂ ಕೂಡ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. 

ಮೂಲತಃ ಗದಗ ಜಿಲ್ಲೆ ರೋಣ ತಾಲೂಕಿನ ಅಸೂಟಿ ಗ್ರಾಮದವನಾದ ಮೌನೇಶ್ ಪತ್ತಾರ್ ನಗರದ ಟಾಟಾ ಮಾರ್ಕೊಪೋಲೋ ಕಂಪನಿಯಲ್ಲಿ ನೌಕರಿ ಮಾಡುತ್ತಿದ್ದ. ಈ ನಡುವೆ ಕಾರ್ಖಾನೆಯಲ್ಲಿ ಇತ್ತೀಚೆಗೆ ಸೋಂಕಿತರ ಸಂಖ್ಯೆ ಹೆಚ್ಚಳವಾಗಿತ್ತು. ಹೀಗಾಗಿ, ಮೌನೇಶ್​ಗೆ ಉದ್ಯೋಗ ಕಳೆದುಕೊಳ್ಳೋ ಆತಂಕ ಶುರುವಾಗಿತ್ತು. ಇದೇ ಯೋಚನೆಯಲ್ಲಿ ಪತ್ನಿ ಹಾಗೂ ಮಗಳಿಗೆ ವಿಷ ನೀಡಿದ್ದ ಮೌನೇಶ್​ ಬಳಿಕ ತಾನೇ ನೇಣಿಗೆ ಶರಣಾಗಿದ್ದಾನೆ. ಘಟನಾ ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com