ಗಂಗಾವತಿ: ಪ್ರವಾಸಕ್ಕೆಂದು ಬಂದಿದ್ದ ಬೆಂಗಳೂರಿನ ಖಾಸಗಿ ಕಾಲೇಜಿ ಕಾನೂನು ವಿದ್ಯಾರ್ಥಿ ಒಬ್ಬ ಕಾಲು ಜಾರಿ ನದಿಯಲ್ಲಿ ಕೊಚ್ಚೊಹೋದ ಘಟನೆ ತಾಲ್ಲೂಕಿನ ಸಣಾಪುರದಲ್ಲಿ ನಡೆದಿದೆ.
ನಾಪತ್ತೆಯಾದ ವಿದ್ಯಾರ್ಥಿಯನ್ನು ರಾಜಸ್ತಾನ ಮೂಲದ ಸಂಪ್ರೀತ್ (23) ಎಂದು ಗುರುತಿಸಲಾಗಿದೆ.
ಹಂಪಿಯ ಪ್ರವಾಸಕ್ಕೆ ಎಂದು ಸ್ನೇಹಿತರೊಂದಿಗೆ ಬಂದಿದ್ದ ವಿದ್ಯಾರ್ಥಿ, ಹೋಳಿ ಅಂಗವಾಗಿ ಸ್ನಾನಕ್ಕೆಂದು ವಿರುಪಾಪುರ ಗಡ್ಡೆಯ ಕಡೆ ಆಗಮಿಸಿದ್ದರು. ಸ್ನಾನ ಮಾಡಲು ತುಂಗಭದ್ರ ನದಿಗೆ ಇಳಿದಾಗ ಕಾಲು ಜಾರಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾಗಿ ಸಹಪಾಠಿಗಳು ತಿಳಿಸಿದ್ದಾರೆ.
ಗ್ರಾಮೀಣ ಸಿಪಿಐ ಸುರೇಶ ತಳವಾರ ಹಾಗೂ ಗ್ರಾಮೀಣ ಪಿಎಸ್ಐ ಜೆ. ದೊಡ್ಡಪ್ಪ ನಾಪತ್ತೆಯಾದ ವಿದ್ಯಾರ್ಥಿಯ ಪತ್ತೆಗೆ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ. ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement