ಗಂಗಾವತಿ: ರಾಷ್ಟ್ರೀಯ ಪ್ರಶಸ್ತಿ ಪಡೆದ ಶಿಕ್ಷಕ ದಿಢೀರ್ ಅಮಾನತು!

ಶಿಕ್ಷಣ ಇಲಾಖೆಯಿಂದ 2014ರಲ್ಲಿ ರಾಷ್ಟ್ರೀಯ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿದ್ದ ಇಲ್ಲಿನ ಪ್ರಾಪರ್ ಮಾದರಿ ಹಿರಿಯ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕನನ್ನು ಶಿಕ್ಷಣ ಇಲಾಖೆ ಅಮಾನತ್ತು ಮಾಡಿ ಅದೇಶ ಹೊರಡಿಸಿದೆ.
ಅಮಾನತು
ಅಮಾನತು
Updated on

ಗಂಗಾವತಿ: ಶಿಕ್ಷಣ ಇಲಾಖೆಯಿಂದ 2014ರಲ್ಲಿ ರಾಷ್ಟ್ರೀಯ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿದ್ದ ಇಲ್ಲಿನ ಪ್ರಾಪರ್ ಮಾದರಿ ಹಿರಿಯ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕನನ್ನು ಶಿಕ್ಷಣ ಇಲಾಖೆ ಅಮಾನತ್ತು ಮಾಡಿ ಅದೇಶ ಹೊರಡಿಸಿದೆ.

ಸರ್ಕಾರಿ ಶಾಲೆಯ ಮಕ್ಕಳ ಮಧ್ಯಾಹ್ನದ‌ ಬಿಸಿಯೂಟಕ್ಕೆ ಎಂದು ಅಕ್ಷರ ದಾಸೋಹದ ಯೋಜನೆಯಡಿ ಪೂರೈಕೆಯಾದ ಅಕ್ಕಿಯನ್ನು ಮೂರು ಕ್ವಿಂಟಾಲ್ ಪ್ರಮಾಣದಷ್ಟು ಕಿರಾಣಿ ಅಂಗಡಿಗೆ ಸಾಗಿಸಿ‌ ಯೋಜನೆ ದುರುಪಯೋಗ ಪಡಿಸಿಕೊಳ್ಳಲು ಯತ್ನಿಸಿದ ಗುರುತರ ಆರೋಪ ಪ್ರಾಪರ್ ಶಾಲೆಯ ಮುಖ್ಯ ಶಿಕ್ಷಕ ತಾವರೆಪ್ಪ ಕಾರಬಾರಿ ಅವರ ಮೇಲಿತ್ತು.

ಈ ಹಿನ್ನೆಲೆ ಪ್ರಾಥಮಿಕ ತನಿಖೆಯ ಸಂದರ್ಭದಲ್ಲಿ ಈ ಆರೊಪ ಸಾಬೀತಾದ ಹಿನ್ನೆಲೆ ಸಾರ್ವ ಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ದೊಡ್ಡಬಸಪ್ಪ‌ ನೀರಲಕೇರಿ ಅಮಾನತ್ತು ಮಾಡಿದ್ದಾರೆ.    
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com