ಬೆಂಗಳೂರು: ಮದ್ಯದಂಗಡಿಗಳು ತೆರೆದು ಮದ್ಯಮಾರಾಟ ಪ್ರಾರಂಭವಾದ ಬೆನ್ನಲ್ಲೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರೌಡಿ ಶೀಟರ್ ಗಳ ಪುಂಡಾಟಗಳು ಮಿತಿ ಮೀರಿದೆ. ಕುಡಿದ ಮತ್ತಿನಲ್ಲಿ ತಮ್ಮ ತಮ್ಮಲ್ಲೇ ಜಗಳ ಆಡಿಕೊಂಡು ಕೊಲೆಗಳಂತಹಾ ಕೃತ್ಯ ಎಸಗುತ್ತಿದ್ದಾರೆ. ಗುರುವಾರ ರಾತ್ರಿ ಬೆಂಗಳೂರು ಇನ್ನೋರ್ವ ರೌಡಿ ಶೀಟರ್ ಹತ್ಯೆಗೆ ಸಾಕ್ಷಿಯಾಗಿದೆ.
ಬ್ಯಾಟರಾಯನಪುರದ ಅಶೋಕ್ ಅಲಿಯಾಸ್ ದಡಿಯಾಎಂಬಾತನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದ ಘಟನೆ ಬೆಂಗಳುರು ಬ್ಯಾಟರಾಯನಪುರದ ಭಾರತೀನಗರದಲ್ಲಿ ನಡೆದಿದೆ.
ಕುಡಿದ ಮತ್ತಿನಲ್ಲಿದ್ದ ಅಶೋಕ್ ನಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಕೊಲೆ ಮಾಡಲಾಗಿದೆ. ಸ್ನೇಹಿತರಿಂದಲೇ ಕೃತ್ಯ ನಡೆದಿದೆ, ಘಟನೆಗೆ ವೈಯುಕ್ತಿಕ ದ್ವೇಷವೇ ಕಾರಣ ಎಂದು ಶಂಕೆ ವ್ಯಕ್ತವಾಗಿದೆ.
ಘಟನೆ ಸಂಬಂಧ ಬ್ಯಾಟರಾಯನಪುರ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳ ಶೋಧಕಾರ್ಯ ನಡೆಸಿದ್ದಾರೆ.
Advertisement