ಹೊಸಪೇಟೆ: ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಮಾದೂರು ಗ್ರಾಮದಲ್ಲಿ ಸಿಡಿಲಿನ ಹೊಡೆತಕ್ಕೆ ಬಾಲಕನೋರ್ವ ಬಲಿಯಾಗಿದ್ದಾನೆ.
ಮಾದೂರು ಗ್ರಾಮದ ರಮೇಶ್ ಎನ್ನುವರ ಮಗು 10 ವರ್ಷದ ಅಜ್ಜಯ್ಯ ಸಿಡಿಲಿಗೆ ಬಲಿಯಾಗಿದೆ.
ತಂದೆ ತಾಯಿ ಹೊಲದ ಕೆಲಸಕ್ಕೆ ಹೋದಾಗ ಬಾಲಕ ಅಜ್ಜಯ್ಯ ಕೂಡಾ ಹೋಗಿದ್ದ. ಮಳೆ ಬರ್ತಿದ್ದ ಹಿನ್ನೆಲೆ ಮರದ ಕೆಳಗೆ ನಿಂತಿದ್ದಾಗ ಬಾಲಕನಿಗೆ ಸಿಡಿಲು ಬಡಿದಿದೆ.
ಕೂಡಲೇ ಸಮೀಪದ ಹಗರಿಬೊಮ್ಮನಹಳ್ಳಿ ಆಸ್ಪತ್ರೆಗೆ ಕರೆದೊಯ್ದರೂ ಬದುಕುಳಿಯದ ಬಾಲಕ.
Advertisement