ಬಾಗಲಕೋಟೆ: ಮಾಜಿ ಸಚಿವೆ, ನಟಿ ಉಮಾಶ್ರೀ ಮನೆಯಲ್ಲಿ ಕಳ್ಳತನ

ಮಾಜಿ ಸಚಿವೆ, ನಟಿ ಉಮಾಶ್ರೀಯವರ ಮನೆಯಲ್ಲಿ ಕಳ್ಳತನ ನಡೆದಿರುವ ಘಟನೆ ಬಾಗಲಕೋಟೆಯ ರಬಕವಿಯ ವಿದ್ಯಾನಗರದಲ್ಲಿ ವರದಿಯಾಗಿದೆ.
ಉಮಾಶ್ರೀ
ಉಮಾಶ್ರೀ
Updated on

ಬಾಗಲಕೋಟೆ: ಮಾಜಿ ಸಚಿವೆ, ನಟಿ ಉಮಾಶ್ರೀಯವರ ಮನೆಯಲ್ಲಿ ಕಳ್ಳತನ ನಡೆದಿರುವ ಘಟನೆ ಬಾಗಲಕೋಟೆಯ ರಬಕವಿಯ ವಿದ್ಯಾನಗರದಲ್ಲಿ ವರದಿಯಾಗಿದೆ.

ರಬಕವಿಯಲ್ಲಿನ ಮನೆ ಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು ಅಪಾರ ಹಣ ಹಾಗೂ ವಸ್ತುಗಳನ್ನು ದೋಚಿದ್ದಾರೆ ಎನ್ನಲಾಗಿದೆ.

ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು ಇದೀಗ ಉಮಾಶ್ರೀ ಬೆಂಗಳೂರಿನಿಂದ ರಬಕವಿಗೆ ತೆರಳುತ್ತಿದ್ದಾರೆ ಅಲ್ಲಿ ಮುಟ್ಟಿದ ನಂತರವೇ ಕಳ್ಳತನವಾಗಿರುವ ಹಣ, ವಸ್ತುಗಳ ನಿಖರ ಪ್ರಮಾಣ ಲಭ್ಯವಾಗಲಿದೆ.

ಸ್ಥಳಕ್ಕೆ  ಸಿಪಿಐ ಕರುಣೇಗೌಡ ಆಗಮಿಸಿ ಪರಿಶೀಲಿಸಿದ್ದು ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com