ಬಾಗಲಕೋಟೆ: ಮಾಜಿ ಸಚಿವೆ, ನಟಿ ಉಮಾಶ್ರೀ ಮನೆಯಲ್ಲಿ ಕಳ್ಳತನ

ಮಾಜಿ ಸಚಿವೆ, ನಟಿ ಉಮಾಶ್ರೀಯವರ ಮನೆಯಲ್ಲಿ ಕಳ್ಳತನ ನಡೆದಿರುವ ಘಟನೆ ಬಾಗಲಕೋಟೆಯ ರಬಕವಿಯ ವಿದ್ಯಾನಗರದಲ್ಲಿ ವರದಿಯಾಗಿದೆ.
ಉಮಾಶ್ರೀ
ಉಮಾಶ್ರೀ

ಬಾಗಲಕೋಟೆ: ಮಾಜಿ ಸಚಿವೆ, ನಟಿ ಉಮಾಶ್ರೀಯವರ ಮನೆಯಲ್ಲಿ ಕಳ್ಳತನ ನಡೆದಿರುವ ಘಟನೆ ಬಾಗಲಕೋಟೆಯ ರಬಕವಿಯ ವಿದ್ಯಾನಗರದಲ್ಲಿ ವರದಿಯಾಗಿದೆ.

ರಬಕವಿಯಲ್ಲಿನ ಮನೆ ಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು ಅಪಾರ ಹಣ ಹಾಗೂ ವಸ್ತುಗಳನ್ನು ದೋಚಿದ್ದಾರೆ ಎನ್ನಲಾಗಿದೆ.

ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು ಇದೀಗ ಉಮಾಶ್ರೀ ಬೆಂಗಳೂರಿನಿಂದ ರಬಕವಿಗೆ ತೆರಳುತ್ತಿದ್ದಾರೆ ಅಲ್ಲಿ ಮುಟ್ಟಿದ ನಂತರವೇ ಕಳ್ಳತನವಾಗಿರುವ ಹಣ, ವಸ್ತುಗಳ ನಿಖರ ಪ್ರಮಾಣ ಲಭ್ಯವಾಗಲಿದೆ.

ಸ್ಥಳಕ್ಕೆ  ಸಿಪಿಐ ಕರುಣೇಗೌಡ ಆಗಮಿಸಿ ಪರಿಶೀಲಿಸಿದ್ದು ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com