ಅರಣ್ಯ ಸಚಿವರನ್ನು ಹುಡುಕಿಕೊಂಡು ಅವರ ಮನೆಗೇ ಬಂದ ಮೊಸಳೆ!

ಅರಣ್ಯ ಸಚಿವ ಆನಂದ್ ಸಿಂಗ್ ಅವರ ನಿವಾಸದ ಬಳಿ ಮೊಸಳೆ ಪ್ರತ್ಯಕ್ಷವಾಗಿದ್ದು, ಕೆಲ ಕಾಲ ಆತಂಕ ಸೃಷ್ಟಿಗೊಂಡಿತ್ತು.
ಮೊಸಳೆ ಸೆರೆ ಹಿಡಿಯುತ್ತಿರುವ ಸಿಬ್ಬಂದಿಗಳು
ಮೊಸಳೆ ಸೆರೆ ಹಿಡಿಯುತ್ತಿರುವ ಸಿಬ್ಬಂದಿಗಳು

ಬಳ್ಳಾರಿ: ಅರಣ್ಯ ಸಚಿವ ಆನಂದ್ ಸಿಂಗ್ ಅವರ ನಿವಾಸದ ಬಳಿ ಮೊಸಳೆ ಪ್ರತ್ಯಕ್ಷವಾಗಿದ್ದು, ಕೆಲ ಕಾಲ ಆತಂಕ ಸೃಷ್ಟಿಗೊಂಡಿತ್ತು.

ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಗರದ ಬೈಪಾಸ್ ಬಳಿ ಎಲ್ಎಲ್'ಸಿ ಕಾಲುವೆ ಇದ್ದು, ಕಳೆದ ರಾತ್ರಿ ಕಾಲುವೆಯಿಂದ ಮೊಸಳೆಯೊಂದು ಸಚಿವರ ನಿವಾಸದ ಮುಂಭಾಗದ ರಸ್ತೆ ಬಳಿ ಬಂದಿದೆ. 

ಬಳಿಕ ಈ ಬಗ್ಗೆ ಮಾಹಿತಿ ತಿಳಿದ ಕಮಲಾಪುರದ ಅಟಲ್ ವಾಜಪೇಯಿ ‌ಝೂಲಾಜಿಕಲ್ ಪಾರ್ಕ್ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಮೊಸಳೆಯನ್ನು ಸೆರೆ ಹಿಡಿದು, ಝೂಲಾಜಿಕಲ್ ಪಾರ್ಕ್​ಗೆ ಕೊಂಡೊಯ್ದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com