ನಟ, ನಟಿಯರು, ಗಣ್ಯರು ತಮ್ಮ ನಡವಳಿಕೆ ಶುದ್ಧವಾಗಿ ಇಟ್ಟುಕೊಳ್ಳಬೇಕು- ಡಾ.ಕೆ.ಸುಧಾಕರ್

ಸಿನಿಮಾ ನಟ-ನಟಿಯರು, ಗಣ್ಯರು ತಮ್ಮ ನಡವಳಿಕೆಯನ್ನು ಶುದ್ಧವಾಗಿ ಇಟ್ಟುಕೊಳ್ಳಬೇಕೆಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್
ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್
Updated on

ಗೌರಿ ಬಿದನೂರು: ಸಿನಿಮಾ ನಟ-ನಟಿಯರು, ಗಣ್ಯರು ತಮ್ಮ ನಡವಳಿಕೆಯನ್ನು ಶುದ್ಧವಾಗಿ ಇಟ್ಟುಕೊಳ್ಳಬೇಕೆಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.

ಶುಕ್ರವಾರ ಗೌರಿಬಿದನೂರು ತಾಲೂಕಿನ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸಿನಿಮಾ ನಟ-ನಟಿಯರು, ಸಮಾಜದಲ್ಲಿ ಗುರುತಿಸಿಕೊಂಡಿರುವ ಗಣ್ಯರು ಜನರಿಗೆ ಅಂಬಾಸಿಡರ್‌ಗಳಿದ್ದಂತೆ. ಅವರೇ ದುಷ್ಚಟಗಳಿಗೆ ದಾಸರಾದರೆ ಅವರನ್ನು ಹಿಂಬಾಲಿಸುವ ಜನರನ್ನು ಸಹ ದಿಕ್ಕುತಪ್ಪಿಸಿದಂತೆ ಆಗಲಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಡ್ರಗ್ಸ್ ದಂದೆಯಲ್ಲಿ ದೊಡ್ಡ ದೊಡ್ಡ ನಾಯಕರು, ನಟ-ನಟಿಯರು ಭಾಗಿರುವ ಬಗ್ಗೆ  ವೈಯಕ್ತಿಯವಾಗಿ ಮಾತನಾಡುವುದಿಲ್ಲ.‌ಆದರೆ, ಇವರು ಸಮಾಜಕ್ಕೆ‌ ಅಂಬಾಸಿಡರ್ ಇದ್ದಂತೆ. ಇವರನ್ನು ಹಿಂಬಾಲಿಸುವ ಜನರಿಗೆ ಮಾರ್ಗದರ್ಶಿಗಳಂತೆ ಶುದ್ಧ ನಡವಳಿಕೆ ಹೊಂದಿರಬೇಕು. ಇವರೇ ಹಾದಿತಪ್ಪಿದರೆ ಹೇಗೆ?  ಎಂದು ಪ್ರಶ್ನಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com