ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಡಳಿತಾಧಿಕಾರಿಯಾಗಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ, ಹಿರಿಯ ಐಎಎಸ್ ಅಧಿಕಾರಿ ಗೌರವ ಗುಪ್ತಾರನ್ನು ನೇಮಸಿ ರಾಜ್ಯ ಸರ್ಕಾರ ಗುರುವಾರ ಅಧಿಕೃತ ಆದೇಶ ಹೊರಡಿಸಿದೆ.
ಪಾಲಿಕೆ ಸದಸ್ಯರ 5 ವರ್ಷದ ಅಧಿಕಾರ ಅವಧಿ ಇಂದಿಗೆ ಮುಕ್ತಾಯವಾಗಿದ್ದು, ಆಡಳಿತಾಧಿಕಾರಿಯನ್ನು ನೇಮಿಸುವ ಮೂಲಕ ರಾಜ್ಯ ಸರ್ಕಾರ ತಕ್ಷಣಕ್ಕೆ ಚುನಾವಣೆ ನಡೆಸುವುದಿಲ್ಲವೆಂಬ ಸಂದೇಶವನ್ನು ರವಾನಿಸಿದೆ.
ಮತ್ತೊಂದೆಡ ಸರ್ಕಾರ ಬಿಬಿಎಂಪಿಗೆ ಪ್ರತ್ಯೇಕ ಕಾನೂನು, ವಾರ್ಡಗಳ ಮರು ವಿಂಗಡಣೆ, ವಲಯ ವಿಂಗಡಣೆ ಸೇರಿದಂತೆ ಆಡಳಿತ ವಿಕೇಂದ್ರೀಕರಣಕ್ಕೆ ತಂತ್ರ ರೂಪಿಸಿದೆ. ಅಲ್ಲದೆ ಹೈಕೋರ್ಟ್ ಗೆ 198 ವಾರ್ಡಗಳ ಮರು ವಿಂಗಡಣೆ, ಚುನಾವಣೆ ನಡೆಸುವ ಸಂಬಂಧ ಸರ್ಕಾರ ಅಫಿಡೆವಿಟ್ ಸಲ್ಲಿಸಿದೆ.
ಗೌರವ್ ಗುಪ್ತ ಅವರು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿಯೂ ಆಗಿದ್ದು, ಬಿಬಿಎಂಪಿಗೆ ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೆ ಹೆಚ್ಚುವರಿಯಾಗಿ ಬಿಬಿಎಂಪಿಯ ಆಡಳಿತ ನಿರ್ವಹಿಸಲಿದ್ದಾರೆ.
Advertisement