ರಾಯಬಾಗ: ಸುಗಂಧಾ ದೇವಿ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ 30 ಜನ ನೆರವಿನ ನಿರೀಕ್ಷೆಯಲ್ಲಿ

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬಾವನಸೌಂದತ್ತಿ ಗ್ರಾಮ ದೇವತೆಯಾಗಿರುವ ಶ್ರೀ ಸುಗಂಧಾ ದೇವಿ ಜಾತ್ರಾ ಮಹೋತ್ಸವಕ್ಕೆ ವ್ಯಾಪಾರಕ್ಕಾಗಿ ಮಹಾರಾಷ್ಟ್ರದಿಂದ ಆಗಮಿಸಿದ ಜನರು ಲಾಕ್ ಡೌನ್ ಹಿನ್ನೆಲೆಯಲ್ಲಿ ಇಲ್ಲಿಯೇ ಉಳಿದಿದ್ದು ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ನೆರವಿನ ನಿರೀಕ್ಷೆಯಲ್ಲಿರುವ ಜನರು
ನೆರವಿನ ನಿರೀಕ್ಷೆಯಲ್ಲಿರುವ ಜನರು

ರಾಯಬಾಗ: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬಾವನಸೌಂದತ್ತಿ ಗ್ರಾಮ ದೇವತೆಯಾಗಿರುವ ಶ್ರೀ ಸುಗಂಧಾ ದೇವಿ ಜಾತ್ರಾ ಮಹೋತ್ಸವಕ್ಕೆ ವ್ಯಾಪಾರಕ್ಕಾಗಿ ಮಹಾರಾಷ್ಟ್ರದಿಂದ ಆಗಮಿಸಿದ ಜನರು ಲಾಕ್ ಡೌನ್ ಹಿನ್ನೆಲೆಯಲ್ಲಿ ಇಲ್ಲಿಯೇ ಉಳಿದಿದ್ದು ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಜಾತ್ರೆಯಲ್ಲಿ ವ್ಯಾಪಾರಕ್ಕಾಗಿ ಬಂದಂತಹ ಮಹಾರಾಷ್ಟ್ರದ ಜನರ ಪೈಕಿಯಲ್ಲಿ ಸುಮಾರು ಜನರಲ್ಲಿ ೩೦ ಕ್ಕಿಂತ ಹೆಚ್ಚು ಜನ ಇಂದು ಮುಗಿಯುತ್ತೋ ನಾಳೆ ಮುಗಿಯುತ್ತೋ ಎಂದು ಗ್ರಾಮದಲ್ಲಿ ಹಾಗೇ ಕಾಲ ಕಳೆಯುತ್ತ ಬಂದರೂ‌ ಮುಗಿಯುವ ಲಕ್ಷಣಗಳು ಕಂಡು ಬರುತ್ತಿಲ್ಲ. ಇದರಿಂದ ಬೇಸತ್ತ ಜನರಿಗೆ ತೀವ್ರ ತೊಂದರೆಯಾಗಿದೆ

ಇನ್ನೂ ಅವರು ತಂದ ಆಟಿಕೆಗಳು ಮಾರದೇ ಎಲ್ಲ ನಷ್ಟದಲ್ಲಿದ್ದಾರೆ.  ಅಲ್ದೇ ತಂದಿರುವ ಸಾಮಗ್ರಿಗಳನ್ನು ಮರಳಿ ಒಯ್ಯು ಹಣ ಇಲ್ಲದೇ ಪರದಾಡುತ್ತಿದ್ದಾರೆ.

ಇವರ ಕಷ್ಟ ಕೇಳಿ ಗ್ರಾಮದ ಕೆಲವರು ಆಹಾರ ನೀಡಿದರೆ ಗ್ರಾಮ ಪಂಚಾಯಿತಿಯವರು ಸಹಾಯ ಮಾಡಿದ್ದು, ಎಲ್ಲ ರೇಷನ್ ಮುಗಿಯುವ ಸ್ಥಿತಿ‌ ನಿರ್ಮಾಣವಾಗಿದೆ. ರಾಯಬಾಗ ತಾಲೂಕಾಡಳಿತ ಇವರಿಗೆ ಸೂಕ್ತ ಆಹಾರದ ವ್ಯವಸ್ಥೆ ಮಾಡಬೇಕಿದೆ.  ಊಟದ ವ್ಯವಸ್ಥೆ ಕಲ್ಪಿಸಿ ಬಡವರಿಗೆ ಅನುಕೂಲ ಮಾಡಬೇಕಿದೆ..

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com