ಕೆ.ಆರ್ ಪುರಂ: ಬಡವರಿಗೆ ಪಡಿತರ ನೀಡುತ್ತಿದ್ದ ದಲಿತ ವ್ಯಕ್ತಿ ಮೇಲೆ ಹಲ್ಲೆ

ತನ್ನ ಸ್ನೇಹಿತರ ಜೊತೆಗೂಡಿ ಬಡವರಿಗೆ ಹಾಲು ಹಂಚುತ್ತಿದ್ದ ವ್ಯಕ್ತಿಗೆ ಉದ್ಯಮಿಯೊಬ್ಬ ನಿಂದಿಸಿ ಹಲ್ಲೆ ಮಾಡಿರುವ ಘಟನೆ ಕೆ.ಆರ್ ಪುರಂ ನಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ತನ್ನ ಸ್ನೇಹಿತರ ಜೊತೆಗೂಡಿ ಬಡವರಿಗೆ ಹಾಲು ಹಂಚುತ್ತಿದ್ದ ವ್ಯಕ್ತಿಗೆ ಉದ್ಯಮಿಯೊಬ್ಬ ನಿಂದಿಸಿ ಹಲ್ಲೆ ಮಾಡಿರುವ ಘಟನೆ ಕೆ.ಆರ್ ಪುರಂ ನಲ್ಲಿ ನಡೆದಿದೆ.

ಅನಿಲ್ ಕುಮಾರ್ ತಮ್ಮ ಸ್ನೇಹಿತರೊಂದಿಗೆ ಸೇರಿ ಬಡವರಿಗೆ ಹಾಲು ಮತ್ತು ಅಗತ್ಯ ವಸ್ತುಗಳನ್ನು ನೀಡುತ್ತಿದ್ದರು. ಪ್ಯಾಕ್ ಮಾಡಿದ ಆಹಾರ ಪಟ್ಟಣ ಮತ್ತು ರೇಷನ್ ವಾಹನವನ್ನು ರಾಧಾಕೃಷ್ಣ ರೆಡ್ಡಿ ಎಂಬುವರ ಮನೆ ಮುಂದೆ ನಿಲ್ಲಿಸಿದ್ದರು.

ವಾಹನ ನೋಡಿದ ರಾಧಾಕೃಷ್ಣ ರೆಡ್ಡಿ, ಅನಿಲ್ ಅವರನ್ನು ನಿಂದಿಸಿದ್ದಾರೆ. ಅನಿಲ್ ಕೆಳ ಜಾತಿಯವನು ಹೀಗಾಗಿ ಆತನಿಂದ ಯಾವ ವಸ್ತುವನ್ನು ತೆಗೆದುಕೊಳ್ಳದಂತೆ ಸ್ಥಳೀಯರಿಗೆ ಹೇಳಿ, ತನ್ನ ಕುಟುಂಬದ ಮೂವರೊಂದಿಗೆ ಸೇರಿ ಅನಿಲ್ ಮತ್ತು ಆತನ ಸ್ನೇಹಿತರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಅನಿಲ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.ಅನಿಲ್ ಮತ್ತು ಆತನ ಕುಟುಂಬಸ್ಥರ ವಿರುದ್ಧ ಜಾತಿ ನಿಂದನೆ ಕೇಸ್ ದಾಖಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com