ಮೈಸೂರು: ಮೈಸೂರು ಸಿಟಿ ಕಾರ್ಪೊರೇಶನ್ಗೆ ಸೇರಿದ ಅಧಿಕಾರಿಯೊಬ್ಬರ ಮನೆಯ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದಾರೆ.
ವಲಯ 6 ರ ಸಹಾಯಕ ಆಯುಕ್ತ ನಾಗರಾಜು ನಿವಾಸದ ಮೇಲೆ ರಾಮನಗರದ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದರು. ಅಧಿಕಾರಿಗಳು ಕುವೆಂಪುನಗರದಲ್ಲಿರುವ ಅವರ ಮನೆ, ಕಚೇರಿ ಹಾಗೂ ಅವರ ಸಂಬಂಧಿಕರ ಮನೆ ಮೇಲೆ ಏಕಕಾಲದಲ್ಲಿ ಆಳಿ ಮಾಡಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಎಸಿಬಿ ಅಧಿಕಾರಿಗಳಿಗೆ ಅಧಿಕಾರಿಯ ವಿರುದ್ಧಅಕ್ರಮ ಆಸ್ತಿ ಬಗೆಗೆ ದೂರು ಬಂದಿತ್ತು ಎನ್ನಲಾಗಿದೆ.
Advertisement