ಮಂಗಳೂರು ಗೋಲಿಬಾರ್: ಸೆ 1 ರಂದು ನ್ಯಾಯಾಂಗ ವಿಚಾರಣೆ

ಮಂಗಳೂರಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರೋಧಿ ಪ್ರತಿಭಟನೆ ವೇಳೆ ಇಬ್ಬರು ಸಾವನ್ನಪ್ಪಿದ ಪೊಲೀಸ್ ಗೋಲಿಬಾರ್‍ ಕುರಿತು ಸೆ 1 ರಂದು ವಿಚಾರಣೆ ನಡೆಯಲಿದೆ.
ಮಂಗಳೂರು ಗೋಲಿಬಾರ್: ಸೆ 1 ರಂದು ನ್ಯಾಯಾಂಗ ವಿಚಾರಣೆ

ಮಂಗಳೂರು: ಮಂಗಳೂರಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರೋಧಿ ಪ್ರತಿಭಟನೆ ವೇಳೆ ಇಬ್ಬರು ಸಾವನ್ನಪ್ಪಿದ ಪೊಲೀಸ್ ಗೋಲಿಬಾರ್‍ ಕುರಿತು ಸೆ 1 ರಂದು ವಿಚಾರಣೆ ನಡೆಯಲಿದೆ.

ಕಳೆದ ವರ್ಷದ ಡಿ 19 ರಂದು ನಡೆದ ಸಿಎಎ ವಿರೋಧಿ ಪ್ರತಿಭಟನೆಯ ವೇಳೆ ಪೊಲೀಸರು ನಡೆಸಿದ ಗೋಲಿಬಾರ್‍ ನಲ್ಲಿ ನೌಶೀನ್ ಮತ್ತು ಜಲೀಲ್ ಎಂಬ ಇಬ್ಬರು ಸಾವನ್ನಪ್ಪಿದ್ದರು.

ನ್ಯಾಯಾಂಗ ವಿಚಾರಣೆಯ ನೇತೃತ್ವ ವಹಿಸಿರುವ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ ಅವರು ಮಿನಿ ವಿಧಾನಸೌಧದ ಎಸಿ ಕೋರ್ಟ್ ಹಾಲ್‌ನಲ್ಲಿ ಸೆ 1ರಂದು ಬೆಳಿಗ್ಗೆ 11ರಿಂದ ಮಧ್ಯಾಹ್ನ 1 ಗಂಟೆಯವರೆಗೆ ವಿಚಾರಣೆ ನಡೆಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com