ಚಿಕ್ಕಬಳ್ಳಾಪುರ: ವಿಚಾರಾಣಾಧೀನ ಖೈದಿಯೊಬ್ಬ ಜೈಲಿನಲ್ಲೇ ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯ ಸಬ್ ಜೈಲಿನಲ್ಲಿ ನಡೆದಿದೆ.
ಗಂಗಪ್ಪ (40) ಮೃತ ಖೈದಿ.
ಅಸ್ವಸ್ಥನಾಗಿದ್ದ ಗಂಗಪ್ಪನನ್ನು ಚಿಂತಾಮಣಿಯ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತನಾಗಿದ್ದಾನೆ.
ಬ್ಯಾಟರಿ ಕಳವು ಪ್ರಕರಣದಲ್ಲಿ ಮುಳಬಾಗಿಲು ಠಾಣೆ ಪೋಲೀಸರು ಗಂಗಪ್ಪನನ್ನು ಬಂಧಿಸಿದ್ದರು.
Advertisement