ಉಡುಪಿ: ವಾಣಿಜ್ಯ ನಗರಿ ಮುಂಬಯಿಯಿಂದ ಉಡುಪಿ ಜಿಲ್ಲೆಗೆ ಬರುವುದನ್ನು ತಪ್ಪಿಸಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಮನವಿ ಮಾಡಿದ್ದಾರೆ.
ಉಡುಪಿಯಲ್ಲಿ ಮುಂಬಯಿಯಿಂದ ಬರುತ್ತಿರುವವರಿಂದ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶೋಭಾ ಮನವಿ ಮಾಡಿದ್ದಾರೆ.
ಕೊರೋನಾ ವಿರುದ್ಧ ಚಿಕಿತ್ಸೆ ನೀಡಲು ಅವಶ್ಯಕತೆ ಬೇಕಾದಷ್ಟು ಪ್ರಮಾಣದಲ್ಲಿ ಬೆಡ್ ಗಳಿವೆ, ಆದರೆ ಮುಂಬಯಿಯಿಂದ ಹೆಚ್ಚಿನ ಪ್ರಮಾಣದಲ್ಲಿ ಜನರು ಬಂದರೇ ಕ್ವಾರಂಟೈನ್ ಸೌಲಭ್ಯ ಒದಗಿಸುವುದು ದೊಡ್ಡ ಸವಾಲಾಗುತ್ತದೆ ಎಂದು ಹೇಳಿದ್ದಾರೆ.
Advertisement