ಕುಂದಾಪುರ: ಬೆಂಗಳೂರಿನಿಂಡ ಕುಂದಾಪುರಕ್ಕೆ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿ ಪ್ರಯಾಣದ ನಡುವೆಯೇ ಹೃದಯಾಘಾತದಿಂದ ಮೃತಪಟ್ಟ ಘಟನೆ ಕುಂದಾಪುರದಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಬಳ್ಕೂರು ದೇವಸ್ಥಾನ ಬೆಟ್ಟು ನಿವಾಸಿ ಶ್ರೀಧರ ಮೂರ್ತಿ ಅವರ ಪುತ್ರ ಸುಹಾನ್ (22) ಎಂದು ಗುರುತಿಸಲಾಗಿದೆ.
ಸುಹಾನ್ ಬೆಂಗಳೂರು ಕಾಲೇಜಿನಲ್ಲಿ ಕಡೇ ವರ್ಷದ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದ. ಶನಿವಾರ ರಾತ್ರಿ 9.45ಕ್ಕೆ ಊರಿಗೆ ತೆರಳಲು ಬಸ್ಸು ಏರಿದ್ದಾನೆ. ಆದರೆ ಬೆಳಿಗ್ಗೆ 7.30ರ ವೇಳೆಗೆ ಬಸ್ಸು ಕುಂದಾಪುರಕ್ಕೆ ತಲುಪಿದರೂ ಸುಹಾನ್ ಇಳಿದಿರಲಿಲ್ಲ. ಇದನ್ನು ಕಂಡ ಬಸ್ ನಿರ್ವಾಹಕ ಪರಿಶೀಲಿಸಿದಾಗ ಸುಹಾನ್ ಮೃತಪಟ್ಟಿರುವುದು ತಿಳಿದಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ ಕುಂದಾಪುರ ಪೋಲೀಸರು ಸುಹಾನ್ ಹೃದಯಾಘಾತ ಅಥವಾ ಇನ್ನಾವುದೇ ಕಾಯಿಲೆಯಿಂದ ಮೃತಪಟ್ಟಿರಬಹುದು ಎಂದು ಶಂಕಿಸಿದ್ದಾರೆ.
Advertisement