ಹೊಸಪೇಟೆ: ಉರುಸ್ ಇರುವ ಹಿನ್ನೆಲೆಯಲ್ಲಿ ಮಾದಲಿ ಮತ್ತು ಅನ್ನ ಸಾಂಬರ್ ಸೇವನೆ ಮಾಡಿದ್ದ 200ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದು ಇಬ್ಬರ ಪರಿಸ್ಥಿತಿ ಗಂಭೀರವಾಗಿದೆ.
ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲ್ವಿ ಗ್ರಾಮದಲ್ಲಿ ಬಾರಿ ಅವಘಡ, ಕಲುಷಿತ ಆಹಾರ ಸೇವನೆಯಿಂದ ಎರಡು ನೂರಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದಾರೆ.
ಗ್ರಾಮದಲ್ಲಿ ಉರುಸ್ ಇರುವ ಹಿನ್ನೆಲೆಯಲ್ಲಿ ಮಾದಲಿ ಮತ್ತು ಅನ್ನ ಸಾಂಬರ್ ಸೇವನೆ ಮಾಡಿದ್ದ ಭಕ್ತರು ಅಸ್ವಸ್ಥಗೊಂಡಿದ್ದು ಅವರನ್ನು ಹಗರಿಬೊಮ್ಮನಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
Advertisement