'ಮಕ್ಕಳ ದಿನಾಚರಣೆ'ಯಂದೇ ದುರಂತ! ಕೊಡಗಿನಲ್ಲಿ 3 ಮಕ್ಕಳೊಡನೆ ನಾಲೆಗೆ ಹಾರಿ ತಾಯಿ ಆತ್ಮಹತ್ಯೆ

ಮಕ್ಕಳ ದಿನಾಚರಣೆಯಂದೇ ಕೊಡಗಿನ ಕುಶಾಲನಗರದಲ್ಲೊಂದು ದುರಂತ ಘಟನೆ ನಡೆದಿದೆ. ಕುಶಾಲನಗರದ ಸಮೀಪ ತೊರೆನೂರು ಬಳಿ ಇರಿವ ಹಾರಂಗಿ ಎಡದಂಡೆ ನಾಲೆಗೆ  ತನ್ನ ಮೂವರು ಮಕ್ಕಳೊಡನೆ ಹಾರಿ ತಾಯಿ ಆತ್ಮಹತ್ಯೆ ಮಡಿಕೊಂಡಿದ್ದಾಳೆ.
'ಮಕ್ಕಳ ದಿನಾಚರಣೆ'ಯಂದೇ ದುರಂತ! ಕೊಡಗಿನಲ್ಲಿ 3 ಮಕ್ಕಳೊಡನೆ ನಾಲೆಗೆ ಹಾರಿ ತಾಯಿ ಆತ್ಮಹತ್ಯೆ

ಕುಶಾಲನಗರ: ಮಕ್ಕಳ ದಿನಾಚರಣೆಯಂದೇ ಕೊಡಗಿನ ಕುಶಾಲನಗರದಲ್ಲೊಂದು ದುರಂತ ಘಟನೆ ನಡೆದಿದೆ. ಕುಶಾಲನಗರದ ಸಮೀಪ ತೊರೆನೂರು ಬಳಿ ಇರಿವ ಹಾರಂಗಿ ಎಡದಂಡೆ ನಾಲೆಗೆ  ತನ್ನ ಮೂವರು ಮಕ್ಕಳೊಡನೆ ಹಾರಿ ತಾಯಿ ಆತ್ಮಹತ್ಯೆ ಮಡಿಕೊಂಡಿದ್ದಾಳೆ.

ಕೌಟುಂಬಿಕ ಕಲಹ ಈ ಅನಾಹುತಕ್ಕೆ ಕಾರಣವೆನ್ನಲಾಗಿದ್ದು ಮೃತರನ್ನು ಚಿತ್ರದುರ್ಗ ಮೂಲದ ವಿನಯ್, ವಿಜಯ್ ಹಾಗೂ ದೀಕ್ಷಾ ಹಾಗೂ ಅವರ ತಾಯಿ  ಚೆನ್ನಮ್ಮ(28)  ಎಂದು ಗುರುತಿಸಲಾಗಿದೆ.

ಕೂಲಿ ಕೆಲಸಕ್ಕಾಗಿ ಚಿತ್ರದುರ್ಗದಿಂದ  ಆಗಮಿಸಿದ್ದ ಇವರು ಗದ್ದೆಯಲ್ಲಿ ಶುಂಠಿ ಕಟಾವಿನ ಕೆಲಸದಲ್ಲಿ ತೊಡಗಿದ್ದರು.

ಇಂದು ಬೆಳಿಗ್ಗೆ ಚೆನ್ನಮ್ಮ ತನ್ನ ಮೂವರು ಮಕ್ಕಳೊಡನೆ ನಾಲೆಗೆ ಹಾರಿದ್ದಾಳೆ.ಈ ಕುರಿತು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com