ಕುವೈತ್ ದೊರೆ ನಿಧನ: ನಾಳೆ ಕರ್ನಾಟಕದಲ್ಲಿ ಶೋಕಾಚರಣೆ

ಕುವೈತ್ ದೊರೆ ಅಮೀರ್ ಶೇಖ್ ಸಬಾಹ್ ಅಲ್ ಜಬೀರ್ ಅಲ್ ಸಬಾಹ್ ಅವರ ನಿಧನದ ಹಿನ್ನೆಲೆಯಲ್ಲಿ ಅಕ್ಟೋಬರ್ 4ರಂದು ಕರ್ನಾಟಕದಲ್ಲಿ ಒಂದು ದಿನ ಶೋಕಾಚರಣೆ ಆಚರಿಸಲು ಸರ್ಕಾರ ಆದೇಶ ಹೊರಡಿಸಿದೆ.
ಕುವೈತ್ ದೊರೆ ಅಮೀರ್ ಶೇಖ್ ಸಬಾಹ್ ಅಲ್ ಜಬೀರ್ ಅಲ್ ಸಬಾಹ್
ಕುವೈತ್ ದೊರೆ ಅಮೀರ್ ಶೇಖ್ ಸಬಾಹ್ ಅಲ್ ಜಬೀರ್ ಅಲ್ ಸಬಾಹ್

ಬೆಂಗಳೂರು: ಕುವೈತ್ ದೊರೆ ಅಮೀರ್ ಶೇಖ್ ಸಬಾಹ್ ಅಲ್ ಜಬೀರ್ ಅಲ್ ಸಬಾಹ್ ಅವರ ನಿಧನದ ಹಿನ್ನೆಲೆಯಲ್ಲಿ ಅಕ್ಟೋಬರ್ 4ರಂದು ಕರ್ನಾಟಕದಲ್ಲಿ ಒಂದು ದಿನ ಶೋಕಾಚರಣೆ ಆಚರಿಸಲು ಸರ್ಕಾರ ಆದೇಶ ಹೊರಡಿಸಿದೆ.

ಈ ದಿನ ಯಾವುದೇ ಅಧಿಕೃತ ಮನೋರಂಜನಾ ಕಾರ್ಯಕ್ರಮ ಇರುವುದಿಲ್ಲ. ನಿಯಮಿತವಾಗಿ ರಾಷ್ಟ್ರ ಧ್ವಜವನ್ನು ಹಾರಿಸಲ್ಪಡುವ ಸರ್ಕಾರದ ಎಲ್ಲಾ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧಮಟ್ಟದಲ್ಲಿ ಹಾರಿಸಲಾಗುವುದು ಎಂದು ರಾಜ್ಯ ಸರ್ಕಾರ ಆದೇಶದಲ್ಲಿ ತಿಳಿಸಿದೆ.

ಕುವೈತ್ ದೊರೆ ಶೇಖ್ ಸಬಾಹ್ ಅಲ್ ಅಹ್ಮದ್ ಅಲಿ ಜಬೀರ್ ಅವರು ಸೆ.29ರಂದು ನಿಧನರಾಗಿದ್ದರು. ಅವರ ಗೌರವಾರ್ಥವಾಗಿ ನಾಳೆ ದೇಶಾದ್ಯಂತ ಶೋಕಾಚರಣೆ ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ಶೋಕಾಚರಣೆಗೆ ಆದೇಶ ಹೊರಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com