ಚಿತ್ರದುರ್ಗ/ದಾವಣಗೆರೆ: ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ಮಸೂದೆ ವಿರೋಧಿಸಿ ರೈತಪರ ಸಂಘಟನೆಗಳು ಹಮ್ಮಿಕೊಂಡಿರುವ ಬಂದ್ ಅವಳಿ ನಗರ ಚಿತ್ರದುರ್ಗ-ದಾವಣಗೆರೆ ಜನತೆಯ ಸಹಜ ಜೀವನದಲ್ಲಿ ವ್ಯತ್ಯಯ ಮೂಡಿಸುವ ಸಾಧ್ಯತೆಯಿದೆ.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಬಂಡವಾಳಶಾಹಿಗಳ ಹಿತಾಸಕ್ತಿಗಾಗಿ ಪಣ ತೊಟ್ಟಿವೆ ಎಂದು ರೈತ ಮುಖಂಡ ಹುಚ್ಚವಾನಹಳ್ಳಿ ಮಂಜುನಾಥ್ ಆರೋಪಿಸಿದ್ದಾರೆ.
ಸಿಎಂ ಯಡಿಯೂರಪ್ಪ ಅವರು ಪ್ರಧಾನಿ ನರೇಂದ್ರ ಮೋದಿ ಆದೇಶವನ್ನು ತಿರಸ್ಕರಿಸಲಾರರು, ಹೀಗಾಗಿ ನಮಗೆ ಪ್ರತಿಭಟನೆ ನಡೆಸದೇ ಬೇರೆ ದಾರಿಯಿಲ್ಲ ಎಂದು ಹೇಳಿದ್ದಾರೆ.
Advertisement