ಮಂಡ್ಯ: ನಾಲೆಯಲ್ಲಿ ಈಜಲು ಹೋಗಿದ್ದ ಮೂವರು ಯುವಕರು ಜಲಸಮಾಧಿ

ಮಂದಗೆರೆ ಎಡದಂಡೆ ನಾಲೆಯಲ್ಲಿ ಈಜಲು ಹೋಗಿ ಮೂವರು ಯುವಕರು ಜಲಸಮಾಧಿಯಾಗಿರುವ ಘಟನೆ ಕೆ.ಆರ್.ಪೇಟೆ ತಾಲೂಕಿನ ಬಂಡಿಹೊಳೆ ಗ್ರಾಮದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮಂಡ್ಯ: ಮಂದಗೆರೆ ಎಡದಂಡೆ ನಾಲೆಯಲ್ಲಿ ಈಜಲು ಹೋಗಿ ಮೂವರು ಯುವಕರು ಜಲಸಮಾಧಿಯಾಗಿರುವ ಘಟನೆ ಕೆ.ಆರ್.ಪೇಟೆ ತಾಲೂಕಿನ ಬಂಡಿಹೊಳೆ ಗ್ರಾಮದಲ್ಲಿ ನಡೆದಿದೆ.

ಮಂಡ್ಯದ ಶ್ರೀ ಚಂದಗೋಳಮ್ಮನವರ ಕ್ಷೇತ್ರಕ್ಕೆ ಪರುವಿಗೆ ಬಂದಿದ್ದ 8 ಯುವಕರ ಪೈಕಿ ಮೂವರು ಯುವಕರು ನಾಲೆಗೆ ಈಜಲು ತೆರಳಿದ್ದ ವೇಳೆ ಈ ಘಟನೆ ಸಂಭವಿಸಿದೆ.‌‌  ಮೈಸೂರಿನ ಕುಂಬಾರಕೊಪ್ಪಲಿನ ಸಿದ್ಧರಾಜು ಅವರ ಪುತ್ರ ಮಂಜು(20), ಆಟೋ ಚಾಲಕ ಮೊಗರಹಳ್ಳಿ ಮಂಟಿಯ ನಿವಾಸಿ ರವಿ(27) ಮತ್ತು ಲೋಕನಾಯಕ ನಗರದ ರವಿ(22) ನಾಟನಹಳ್ಳಿ ಸಮೀಪದ ಮಂದಗೆರೆ ಎಡದಂಡೆ ನಾಲೆಯ ನೀರಿನಲ್ಲಿ ಮುಳುಗಿದ ದುರ್ದೈವಿಗಳು.

ಕೆ.ಆರ್.ಪೇಟೆ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು ಠಾಣಾಧಿಕಾರಿ ಶಿವಣ್ಣ ಅವರ ನೇತೃತ್ವದಲ್ಲಿ ಸತತವಾದ ಕಾರ್ಯಾಚರಣೆ ನಡೆಸಿದರೂ ಕತ್ತಲಾದ ಹಿನ್ನೆಲೆಯಲ್ಲಿ ಮೃತ ಯುವಕರ ದೇಹಗಳನ್ನು ಪತ್ತೆ ಮಾಡಲು ಸಾಧ್ಯವಾಗಲಿಲ್ಲ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com