ರಾಜ್ಯದ ರೈತರಿಂದ ಹಸಿರು ಕಾಳು, ಉದ್ದಿನ ಬೇಳೆ ಖರೀದಿಸಲು ಕೇಂದ್ರ ಅಸ್ತು

ಕರ್ನಾಟಕದ ರೈತರಿಂದ ಹಸಿರು ಕಾಳು ಮತ್ತು ಉದ್ದಿನ ಬೇಳೆ ಖರೀದಿಸಲು ಕೇಂದ್ರ ಕೃಷಿ ಸಚಿವಾಲಯವು ಅನುಮೋದನೆ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕರ್ನಾಟಕದ ರೈತರಿಂದ ಹಸಿರು ಕಾಳು ಮತ್ತು ಉದ್ದಿನ ಬೇಳೆ ಖರೀದಿಸಲು ಕೇಂದ್ರ ಕೃಷಿ ಸಚಿವಾಲಯವು ಅನುಮೋದನೆ ನೀಡಿದೆ.

ಕೇಂದ್ರ ಕೃಷಿ ಸಚಿವಾಲಯ ಹೊರಡಿಸಿದ ಆದೇಶದಲ್ಲಿ, ಕೇಂದ್ರವು ಗರಿಷ್ಠ ಪ್ರಮಾಣದ 30,000 ಮೆ.ಟನ್ ಹಸಿರು ಕಾಳು ಮತ್ತು 10,000 ಮೆ.ಟನ್ ಉದ್ದಿನ ಬೇಳೆ ಖರೀದಿಸಲು ಅನುಮೋದನೆ ನೀಡಿದೆ.

ಕೇಂದ್ರದ ಅನುಮೋದನೆ ಪಡೆದ ತಕ್ಷಣ, ರಾಜ್ಯ ಸರ್ಕಾರ ಮುಂದಿನ 90 ದಿನಗಳವರೆಗೆ ಖರೀದಿಗಾಗಿ ಆದೇಶ ನೀಡಿದ್ದು. ಹಸಿರು ಕಾಳನ್ನು ಪ್ರತಿ ಕ್ವಿಂಟಾಲ್‌ಗೆ 7,275 ರೂ. ಮತ್ತು ಉದ್ದಿನ ಬೇಳೆಯನ್ನು ಪ್ರತಿ ಕ್ವಿಂಟಾಲ್‌ಗೆ 6,300 ರೂ.ಗೆ ಖರೀದಿಸಲಾಗುವುದು ಎಂದು ತಿಳಿಸಿದೆ.

ಸರ್ಕಾರ ಹೊರಡಿಸಿದ ಆದೇಶಗಳ ಪ್ರಕಾರ, ರೈತರು ಮುಂದಿನ 45 ದಿನಗಳವರೆಗೆ ಮಾರಾಟಕ್ಕಾಗಿ ನೋಂದಾಯಿಸಿಕೊಳ್ಳಬಹುದು ಮತ್ತು 90 ದಿನಗಳಲ್ಲಿ ಖರೀದಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಬೆಂಬಲ ಬೆಲೆ ಯೋಜನೆಯಡಿ ಪ್ರತಿ ರೈತರಿಂದ ಗರಿಷ್ಠ ಆರು ಕ್ವಿಂಟಾಲ್‌ಗಳನ್ನು ಖರೀದಿಸಲಾಗುವುದು ಮತ್ತು ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಜಮಾ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com