ಕಾರವಾರದ ಐಎನ್ಎಸ್ ಕದಂಬ ನೌಕಾನೆಲೆಗೆ ರಾಜ್ಯಪಾಲ ಗೆಹ್ಲೋಟ್ ಭೇಟಿ

ನೌಕಾಪಡೆಯ ದಿನವಾದ ಶನಿವಾರ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕಾರವಾರದ ಐಎನ್ಎಸ್ ಕದಂಬ ನೌಕಾನೆಲೆಗೆ ಶನಿವಾರ ಭೇಟಿ ನೀಡಿ, ನೌಕಾಪಡೆಗಳಿಗೆ ಶುಭಾಶಯಗಳನ್ನು ಕೋರಿದರು.
ಕಾರವಾರದ ಐಎನ್ಎಸ್ ಕದಂಬ ನೌಕಾನೆಲೆಯಲ್ಲಿ ರಾಜ್ಯಪಾಲ ಗೆಹೋಟ್.
ಕಾರವಾರದ ಐಎನ್ಎಸ್ ಕದಂಬ ನೌಕಾನೆಲೆಯಲ್ಲಿ ರಾಜ್ಯಪಾಲ ಗೆಹೋಟ್.
Updated on

ಕಾರವಾರ: ನೌಕಾಪಡೆಯ ದಿನವಾದ ಶನಿವಾರ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕಾರವಾರದ ಐಎನ್ಎಸ್ ಕದಂಬ ನೌಕಾನೆಲೆಗೆ ಶನಿವಾರ ಭೇಟಿ ನೀಡಿ, ನೌಕಾಪಡೆಗಳಿಗೆ ಶುಭಾಶಯಗಳನ್ನು ಕೋರಿದರು.

ನೌಕಾನೆಲೆಗೆ ಆಗಮಿಸಿದ ರಾಜ್ಯಪಾಲರನ್ನು ಕರ್ನಾಟಕ ನೌಕಾ ಪ್ರದೇಶದ ಕಮಾಂಡಿಂಗ್ ಫ್ಲಾಗ್ ಆಫೀಸರ್ ರಿಯರ್ ಅಡ್ಮಿರಲ್ ಮಹೇಶ್ ಸಿಂಗ್ ಎನ್ ಎಂ ಅವರು ಸ್ವಾಗತಿಸಿದರು.

ಬಳಿಕ ರಾಜ್ಯಪಾಲರಿಗೆ ಐಎನ್‌ಎಸ್ ಕದಂಬ ಪರೇಡ್ ಮೈದಾನದಲ್ಲಿ ಗೌರವ ವಂದನೆ ಸಲ್ಲಿಸಲಾಯಿತು. ರಿಯರ್ ಅಡ್ಮಿರಲ್ ಮಹೇಶ್ ಸಿಂಗ್ ಅವರೊಂದಿಗೆ ರಾಜ್ಯಪಾಲರು ಐಎನ್ಎಸ್ ವಿಕ್ರಮಾದಿತ್ಯ ಹಡಗಿನಲ್ಲಿ ಪ್ರಯಾಣ ಮಾಡಿದರು, ಅಲ್ಲಿ ಅವರನ್ನು ಕ್ಯಾಪ್ಟನ್ ಸುಶೀಲ್ ಮೆನನ್, ಕಮಾಂಡಿಂಗ್ ಆಫೀಸರ್ ಐಎನ್ಎಸ್ ವಿಕ್ರಮಾದಿತ್ಯ ಅವರು ಸ್ವಾಗತಿಸಿದರು.

ನೌಕಪಡೆ ದಿನದ ಅಂಗವಾಗಿ ಐಎನ್ಎಸ್ ಕದಂಬ ನೌಕಾನೆಲೆಯಲ್ಲಿ ಯುದ್ಧನೌಕೆಗಳನ್ನು ಸಿಂಗರಿಸಲಾಗಿತ್ತು. ನೌಕಾಪಡೆಯ ಬ್ಯಾಂಡ್ ತಂಡ ಲಯಬದ್ಧವಾಗಿ ಬ್ಯಾಂಡ್ ನುಡಿಸಿ ಮೆರುಗು ತಂದಿತು.

ಆಕರ್ಷಿಕ ಬೀಟಿಂಗ್ ರೀಟ್ರೇಟ್ ಪ್ರದರ್ಶಿಸಲಾಯಿತು. ನೌಕಾದಿನದ ಸಮಾರಂಭದಲ್ಲಿ ರಾಜ್ಯಪಾಲಕು ಪಾಲ್ಗೊಂಡಿರುವುದಕ್ಕೆ ಕಂಬದ ನೌಕಾನೆಲೆಯ ಫ್ಲ್ಯಾಗ್ ಆಫೀಸರ್ ರಿಯರ್ ಅಡ್ಮಿರಲ್ ಮಹೇಶ್ ಸಿಂಗ್ ಅವರು ಸಂತಸ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com