ಹಂಪಿಯ ಸ್ಮಾರಕ ಬಗ್ಗೆ ಅವಹೇಳನದ ಮಾತು: ಬೆಂಗಳೂರು ಮೂಲದ ಸ್ಟಾಂಡ್ ಅಪ್ ಕಾಮಿಡಿಯನ್ ವಿರುದ್ಧ ಕೇಸು ದಾಖಲು

ಐತಿಹಾಸಿಕ ಸ್ಮಾರಕ, ವಿಶ್ವ ಪಾರಂಪರಿಕ ತಾಣ ಹಂಪಿಯ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ ಬೆಂಗಳೂರು ಮೂಲದ ಕಾಮಿಡಿಯನ್ (ಹಾಸ್ಯನಟ)ಗೆ ಸಂಕಷ್ಟ ತಂದೊಡ್ಡಿದೆ. ಸ್ಟಾಂಡ್ ಅಪ್ ಕಾಮಿಡಿಯನ್ ಪಿ ಶ್ರವಣ್ ವಿರುದ್ಧ ಹಂಪಿ ಪೊಲೀಸರು ಕೇಸು ದಾಖಲಿಸಿದ್ದಾರೆ. 
ಹಂಪಿಯ ಸಂಗೀತ ಕಂಬಗಳು
ಹಂಪಿಯ ಸಂಗೀತ ಕಂಬಗಳು
Updated on

ಹಂಪಿ: ಐತಿಹಾಸಿಕ ಸ್ಮಾರಕ, ವಿಶ್ವ ಪಾರಂಪರಿಕ ತಾಣ ಹಂಪಿಯ ಸಂಗೀತ ಕಂಬಗಳು ಮತ್ತು ಇತರ ಕಟ್ಟಡಗಳ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ ಬೆಂಗಳೂರು ಮೂಲದ ಕಾಮಿಡಿಯನ್ (ಹಾಸ್ಯನಟ)ಗೆ ಸಂಕಷ್ಟ ತಂದೊಡ್ಡಿದೆ. ಸ್ಟಾಂಡ್ ಅಪ್ ಕಾಮಿಡಿಯನ್ ಪಿ ಶ್ರವಣ್ ವಿರುದ್ಧ ಹಂಪಿ ಪೊಲೀಸರು ಕೇಸು ದಾಖಲಿಸಿದ್ದಾರೆ. 

ಇಲ್ಲಿ ಶ್ರವಣ್ ಹೇಳಿರುವ ಮಾತುಗಳ ವಿಡಿಯೊವನ್ನು ಸಂಪೂರ್ಣವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹಂಪಿ ಪೊಲೀಸರು ಹೇಳಿದ್ದು ಕೇಸನ್ನು ಬೆಂಗಳೂರಿಗೆ ವರ್ಗಾಯಿಸಲಾಗಿದೆ ಎಂದು ತಿಳಿಸಿದ್ದಾರೆ. 

ಕಳೆದ ತಡರಾತ್ರಿ ವಿಜಯನಗರ ಸ್ಮಾರಕ ಸಂರಕ್ಷಣಾ ಸಮಿತಿ ಮತ್ತು ವಿದ್ಯಾರಣ್ಯ ಗೈಡ್ಸ್ ಅಸೋಸಿಯೇಷನ್ ಕಾಮಿಡಿಯನ್ ವಿರುದ್ಧ ಕೇಸು ದಾಖಲಿಸಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com