ಇಂದಿನಿಂದ ಭಕ್ತರಿಗೆ ಉಡುಪಿ ಶ್ರೀಕೃಷ್ಣನ ದರ್ಶನ ಲಭ್ಯ!

ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಇಂದಿನಿಂದ ಭಕ್ತರಿಗೆ ಶ್ರೀ ಕೃಷ್ಣನ ದರ್ಶನ ಲಭಿಸಲಿದೆ.
ಶ್ರೀ ಕೃಷ್ಣ
ಶ್ರೀ ಕೃಷ್ಣ

ಉಡುಪಿ: ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಇಂದಿನಿಂದ ಭಕ್ತರಿಗೆ ಶ್ರೀ ಕೃಷ್ಣನ ದರ್ಶನ ಲಭಿಸಲಿದೆ.

ಇಂದಿನಿಂದ (ಜುಲೈ 11 ರ ಭಾನುವಾರ) ಭಕ್ತಾದಿಗಳಿಗೆ ಶ್ರೀ ಕೃಷ್ಣನ ದರ್ಶನಕ್ಕಾಗಿ ಅವಕಾಶ ಕಲ್ಪಿಸಲು ಲು ಶ್ರೀ ಕೃಷ್ಣ ಮಠ ಆಡಳಿತ ನಿರ್ಧರಿಸಿದೆ.

ಭಕ್ತಾದಿಗಳು ಮಧ್ಯಾಹ್ನ 2ರಿಂದ ಸಂಜೆ 6ರವರೆಗೆ ಕೃಷ್ಣನ ದರ್ಶನ ಪಡೆಯಬಹುದು ಎಂದು ಪ್ರಕಟಣೆ ಹೇಳಿದೆ.

ಒಂದು ವಾರದ ಹಿಂದೆ ದೇವಾಲಯಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದ್ದರೂ, ಶ್ರೀ ಕೃಷ್ಣ ಮಠ ಆಡಳಿತವು ಇನ್ನೊಂದು ವಾರ ಕಾಯಲು ನಿರ್ಧರಿಸಿತ್ತು. ಮಠದ ಆಡಳಿತವು ಹೊರಡಿಸಿದ  ಪತ್ರಿಕಾ ಹೇಳಿಕೆಯಲ್ಲಿ, "ಜುಲೈ 11 ರ ಭಾನುವಾರದಿಂದ ಭಕ್ತರಿಗೆ ಕೃಷ್ಣನ ದರ್ಶನ ಪಡೆಯಲು ಅವಕಾಶವಿರುತ್ತದೆ. ಎಲ್ಲಾ ಭಕ್ತರು ಕಡ್ಡಾಯವಾಗಿ ಫೇಸ್ ಮಾಸ್ಕ್ ಧರಿಸಬೇಕು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು" ಎಂದು ಸೂಚಿಸಿದೆ.

ಲಾಕ್ ಡೌನ್ ಕಾರಣ ಭಕ್ತರಿಗೆ 2-3 ತಿಂಗಳ ನಂತರ ದೇವಾಲಯ ತೆರೆದಿವೆ.

ಇನ್ನು 2022ರಲ್ಲಿ ನಡೆಯುವ ಶ್ರೀಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥರ ಪರ್ಯಾಯ ಪೂರ್ವಭಾವಿಯಾದ ಕಟ್ಟಿಗೆ ಮಹೂರ್ತವು ಭಾನುವಾರ ಬೆಳಿಗ್ಗೆ ೮.೪೫ಕ್ಕೆ ಕೃಷ್ಣಾಪುರ ಮಠದ ವತಿಯಲ್ಲಿ ನೆರವೇರಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com