ಮೈಸೂರು ಜಿಲ್ಲಾಧಿಕಾರಿಗಳ ಪಾರಂಪರಿಕ ಕಟ್ಟಡ ನಿವಾಸದಲ್ಲಿ ಈಜುಕೊಳ ನಿರ್ಮಾಣ: ನಿಯಮ ಉಲ್ಲಂಘನೆ ಬಗ್ಗೆ ವಾರದಲ್ಲಿ ವರದಿ

1894 ರಲ್ಲಿ ನಿರ್ಮಿಸಲಾದ ಮೈಸೂರು ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸ ಜಲಸನ್ನಿಧಿಯ ಪ್ರಶಾಂತ ವಿಲ್ಲಾ ಈಗ ವಿವಾದದ ತಾಣವಾಗಿ ಮಾರ್ಪಟ್ಟಿದೆ.
ರೋಹಿಣಿ ಸಿಂಧೂರಿ
ರೋಹಿಣಿ ಸಿಂಧೂರಿ

ಮೈಸೂರು: 1894 ರಲ್ಲಿ ನಿರ್ಮಿಸಲಾದ ಮೈಸೂರು ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸ ಜಲಸನ್ನಿಧಿಯ ಪ್ರಶಾಂತ ವಿಲ್ಲಾ ಈಗ ವಿವಾದದ ತಾಣವಾಗಿ ಮಾರ್ಪಟ್ಟಿದೆ.

ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಜಲಸನ್ನಿಧಿ ಆವರಣದಲ್ಲಿ ಒಳಾಂಗಣ ಈಜುಕೊಳ ಮತ್ತು ಖಾಸಗಿ ಜಿಮ್ ನಿರ್ಮಿಸಿದ ತಿಂಗಳುಗಳ ನಂತರ ಚರ್ಚೆಗೆ ಕಾರಣವಾಗಿದೆ.

ಈ ಸಂಬಂಧ ತನಿಖೆ ನಡೆಸಿ 7 ದಿನಗಳೊಳಗೆ ವರದಿ ಸಲ್ಲಿಸುವಂತೆ ಪ್ರಾದೇಶಿಕ ಆಯುಕ್ತರಿಗೆ ಕಂದಾಯ ಇಲಾಖೆ ಕಾರ್ಯದರ್ಶಿ ಸೂಚಿಸಿದ್ದಾರೆ. 

ಜೆಡಿಎಸ್ ಶಾಸಕ ಸಾರಾ ಮಹೇಶ್  ಜಿಲ್ಲಾಧಿಕಾರಿ ನಿವಾಸದಲ್ಲಿ ಈಜುಕೊಳ ನಿರ್ಮಾಣದ ಬಗ್ಗೆ ಮಾತನಾಡಿದ್ದರು, ಈ ಹಿನ್ನೆಲೆಯಲ್ಲಿ ಮೇ 31 ರಂದು ತನಿಖೆಗೆ ಆದೇಶ ಹೊರಡಿಸಲಾಗಿದೆ.  

ಮುಂದಿನ ದಿನಗಳಲ್ಲಿ ಪ್ರಾದೇಶಿಕ ಆಯುಕ್ತರು ಈಜುಕೊಳ ನಿರ್ಮಾಣವನ್ನು ಪರಿಶೀಲಿಸಲಿದ್ದಾರೆ,ಈ ಸಂಬಂಧ ಇದುವರೆಗೆ ಹಲವು ದಾಖಲೆಗಳನ್ನು ಸಂಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com