ಬಿ ಎಸ್ ಯಡಿಯೂರಪ್ಪ
ರಾಜ್ಯ
ಜೂನ್ 15ಕ್ಕೆ ಸಿಎಂ ಯಡಿಯೂರಪ್ಪ, ಸಚಿವರು ಮತ್ತು ಬಿಜೆಪಿ ಶಾಸಕರ ನಿವಾಸ ಮುಂದೆ ರೈತ ಸಂಘಟನೆಗಳ ಪ್ರತಿಭಟನೆ
ಕೋವಿಡ್ ಸೋಂಕಿನ ಅಲೆ ಸಮಾಜದ ಅನೇಕ ವರ್ಗದ ಜನರ ಮೇಲೆ ಅಪಾರ ಪರಿಣಾಮ ಬೀರಿದೆ, ಇನ್ನಿಲ್ಲದ ಸಂಕಷ್ಟವನ್ನು ಕೂಡ ತಂದೊಡ್ಡಿದೆ. ಅದರಲ್ಲಿ ಕೃಷಿ ಸಮುದಾಯ ಕೂಡ ಒಂದು.
ಬೆಂಗಳೂರು: ಕೋವಿಡ್ ಸೋಂಕಿನ ಅಲೆ ಸಮಾಜದ ಅನೇಕ ವರ್ಗದ ಜನರ ಮೇಲೆ ಅಪಾರ ಪರಿಣಾಮ ಬೀರಿದೆ, ಇನ್ನಿಲ್ಲದ ಸಂಕಷ್ಟವನ್ನು ಕೂಡ ತಂದೊಡ್ಡಿದೆ. ಅದರಲ್ಲಿ ಕೃಷಿ ಸಮುದಾಯ ಕೂಡ ಒಂದು.
ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಸಿಗದೆ, ಸರಿಯಾದ ಬೆಲೆ ಸಿಗದೆ ರೈತರು ಪರಿತಪಿಸುತ್ತಿದ್ದಾರೆ. ಈ ಸನ್ನಿವೇಶದಲ್ಲಿ ವಿಶೇಷ ಪ್ಯಾಕೇಜ್ ಒದಗಿಸುವಂತೆ ಮತ್ತು ಕೊರೋನಾ ಮೂರನೇ ಅಲೆಗೆ ತಕ್ಷಣವೇ ಸಿದ್ಧತೆ ಮಾಡಿಕೊಳ್ಳುವಂತೆ ಒತ್ತಾಯಿಸಿ ರೈತ ಸಂಘಟನೆಗಳು ಪ್ರತಿಭಟನೆಗೆ ಸಜ್ಜಾಗಿವೆ.
ಇದೇ 15ರಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನಿವಾಸದ ಎದುರು ಮತ್ತು ಸಚಿವರು ಹಾಗೂ ಬಿಜೆಪಿಯ ಶಾಸಕರ ಮನೆಗಳ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘಟನೆಗಳು ತಿಳಿಸಿವೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ