ಚಿರತೆಯ ಸಾಂದರ್ಭಿಕ ಚಿತ್ರ
ಚಿರತೆಯ ಸಾಂದರ್ಭಿಕ ಚಿತ್ರ

ಮೈಸೂರು ಬಳಿ ಚಿರತೆಗಳಿಗೆ ವಿಷ ಪ್ರಶಾನ!

ನಂಜನಗೂಡು ಮತ್ತು ಎಚ್.ಡಿ.ಕೋಟೆ ಬಳಿ 20 ದಿನಗಳ ಅವಧಿಯಲ್ಲಿ ಆರು ಚಿರತೆಗಳಿಗೆ ಇತ್ತೀಚಿಗೆ ವಿಷ ಪ್ರಶಾನ ಮಾಡಲಾಗಿದ್ದು, ದುಷ್ಕರ್ಮಿಗಳು ಕೂಡಲೇ ಪತ್ತೆ ಹಚ್ಚಿ, ಕಠಿಣ ಸಂದೇಶ ರವಾನಿಸಬೇಕು ಎಂದು ಪರಿಸರ ಹೋರಾಟಗಾರರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ಮೈಸೂರು: ನಂಜನಗೂಡು ಮತ್ತು ಎಚ್.ಡಿ.ಕೋಟೆ ಬಳಿ 20 ದಿನಗಳ ಅವಧಿಯಲ್ಲಿ ಆರು ಚಿರತೆಗಳಿಗೆ ಇತ್ತೀಚಿಗೆ ವಿಷ ಪ್ರಶಾನ ಮಾಡಲಾಗಿದ್ದು, ದುಷ್ಕರ್ಮಿಗಳು ಕೂಡಲೇ ಪತ್ತೆ ಹಚ್ಚಿ, ಕಠಿಣ ಸಂದೇಶ ರವಾನಿಸಬೇಕು ಎಂದು ಪರಿಸರ ಹೋರಾಟಗಾರರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ಮಾನವ- ವನ್ಯಜೀವಿಗಳ ನಡುವೆ ಸಂಘರ್ಷವೇರ್ಪಟ್ಟು, ವನ್ಯಜೀವಿನಗಳು ಸಾಯುತ್ತಿರುವುದು ಇದು ಮೊದಲೇನಲ್ಲ. 2009ರಲ್ಲಿ ಕುಪ್ಪಸೋಗೆ ಬಳಿ ಉಲ್ಲಾಹಳ್ಳಿಯ ಎಡದಂಡೆ ಕಾಲುವೆಯಲ್ಲಿ ನಾಲ್ಕು ಆನೆಗಳು ಮೃತಪಟ್ಟಿರುವುದು ಕಂಡುಬಂದಿತ್ತು. ಈ ಆನೆಗಳನ್ನು ಸಾಯಿಸಲು ಸೈನೈಡ್ ಬಳಸಿರುವುದು ರಾಸಾಯನಿಕ ವಿಶ್ಲೇಷಣೆಗಳಿಂದ ತಿಳಿದುಬಂದಿತ್ತು.

ಆನೆಗಳ ಸಾವು ಕುರಿತಂತೆ ಅಧ್ಯಯನ ನಡೆಸಲು ಸಮಿತಿಯೊಂದನ್ನು ರಚಿಸುವಂತೆ ಅರಣ್ಯ ಇಲಾಖೆಗೆ ಆದೇಶಿಸಿತ್ತು. ಆದರೆ, ಇದು ನಡೆದು 10 ವರ್ಷ ಕಳೆದರೂ, ದುಷ್ಕರ್ಮಿಗಳನ್ನು ಇನ್ನೂ ಪತ್ತೆ ಹಚ್ಚಿ, ಶಿಕ್ಷೆ ಕೊಡ ಆಗಲಿಲ್ಲ.

ಈ ಮಧ್ಯೆ ಮೈಸೂರಿನ ಹೊರವಲಯ ಬೆಳವಾಡಿಯಲ್ಲಿ ಶಂಕಿತ ವಿಷ ಪ್ರಾಶನದಿಂದ ಚಿರತೆ ಹಾಗೂ ಅದರ ಮರಿಗಳು ಸಾವನ್ನಪ್ಪಿವೆ. ಸತ್ತ ಚಿರತೆಗಳ ಬಳಿ ದಾರಿತಪ್ಪಿದ ನಾಯಿಯ ಅರ್ಧ ತಿನ್ನಲಾದ ಶವ ಪತ್ತೆಯಾಗಿದೆ. ಇದು ಚಿರತೆಗಳ ಸಾವಿಗೆ ಸಮೀಪದಲ್ಲಿಯೇ ವಾಸಿಸುತ್ತಿರುವ ಜನರೇ ಕಾರಣವಾಗಿರಬಹುದು ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಅರಣ್ಯ ಅಧಿಕಾರಿಗಳು ಈ ಚಿರತೆಗಳ ಶವಗಳನ್ನು ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಗೆ ಕಳುಹಿಸಿದ್ದಾರೆ.

ಮರಿಗಳೊಂದಿಗೆ ಸಾವನ್ನಪ್ಪಿರುವ ಚಿರತೆ
ಮರಿಗಳೊಂದಿಗೆ ಸಾವನ್ನಪ್ಪಿರುವ ಚಿರತೆ

  ಇಂತಹ ಪ್ರಕರಣಗಳು ಮರು ಕಳುಹಿಸುತ್ತಿದ್ದರೂ, ಆನೆಗಳ ಸಾವಿಗೆ ಕಾರಣರಾದವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಜ್ಞರು ಹೇಳಿದ್ದಾರೆ. ರೈತರು ಅಥವಾ ಭೂ ಮಾಲೀಕರಿಂದಲೇ ಇಂತಹ ವನ್ಯಜೀವಿಗಳ ಸಾವು ಸಂಭವಿಸುತ್ತಿದೆ ಎಂದು ಹೇಳುವುದು ಕಷ್ಟ. ಚಿರತೆಗಳು ವಿಷಪೂರಿತ ನಾಯಿಯನ್ನು ಬೇರೆಡೆ ಹಿಡಿದು ಹೊಲಕ್ಕೆ ತಂದಿರಬಹುದು. ಕೃಷಿ ಜಮೀನುಗಳ ಮಾಲೀಕರನ್ನು ತೊಂದರೆಗೆ ಸಿಲುಕಿಸಲು ದುಷ್ಕರ್ಮಿಗಳು ವನ್ಯಜೀವಿಗಳಿಗೆ ವಿಷ ಸೇವಿಸಿದ ಪ್ರಕರಣಗಳೂ ನಡೆದಿವೆ ಎಂದು ಪಶು ವೈದ್ಯ ಡಾ. ನಾಗರಾಜ್ ಹೇಳುತ್ತಾರೆ.

ದೊಡ್ಡ ಬೆಕ್ಕುಗಳ ಭಯದಿಂದ ತಮ್ಮ ಹಸು, ಕುರಿ ಮತ್ತು ಮೇಕೆಗಳನ್ನು ಮೇಯಿಸುವುದು ಕಷ್ಟ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.  ಅಲ್ಲದೆ, ದನಗಳ ಸಾವಿಗೆ ಪಾವತಿಸಿದ ಪರಿಹಾರವು ಎಂದಿಗೂ ಅವುಗಳನ್ನು ತಲುಪುವುದಿಲ್ಲ. ಕಬಿನಿ ಎಡದಂಡೆ ಕಾಲುವೆಯ ಬಳಿ  ಕುರಿ ಮೇಯಿಸುತ್ತಿದ್ದಾಗ ಚಿರತೆಯೊಂದು ತನ್ನ ಮೂರು ಕುರಿಗಳ ಮೇಲೆ ದಾಳಿ ಮಾಡಿತ್ತು. ಕಿರುಚಿಕೊಂಡಾಗ ಕುರಿಗಳನ್ನು ಕೊಲ್ಲುವ ಬದಲು ಕಣ್ಮರೆಯಾಯಿತು ಎಂದು ಮಾದನಹಳ್ಳಿಯ ಗೋವಿಂದ ನಾಯಕ್ ಹೇಳಿದರು.

ಕತ್ತಲೆ ನಂತರ ಚಿರತೆಗಳು ಕಾಣಿಸುತ್ತವೆ ಮತ್ತು ಕಬ್ಬಿನ ಗದ್ದೆ ನುಗ್ಗಲು ಪ್ರಯತ್ನಿಸುತ್ತವೆ ಆದರೆ, ಅವುಗಳನ್ನು ನೋಡಿದಾಗ ಜನರು ಹೆದರುತ್ತಾರೆ. ಇದಕ್ಕಾಗಿಯೇ ವಿಷ ಪ್ರಾಶನ ನಡೆಯುತ್ತಿದೆ ಎಂದು ಹೆಬ್ಬಾಳದ ಪಶು ವೈದ್ಯಕೀಯ ಕಾಲೇಜ್ ಮುಖ್ಯ ಪಶು ಅಧಿಕಾರಿ ಡಾ. ಹೆಚ್. ಎಸ್. ಪ್ರಯಾಗ್ ಹೇಳಿದರು.

ಚಿರತೆಗಳ ಸಾವಿಗೆ ಕಾರಣ ತಿಳಿಯಲು ವರದಿಗಾಗಿ ಕಾಯುತ್ತಿದ್ದೇವೆ. ನಾವು ಐದು ಮಂದಿ ಶಂಕಿತರ ವಿಚಾರಣೆ ಆರಂಭಿಸಿದ್ದೇವೆ. ಇದರಿಂದ ಪ್ರಕರಣ ಬಗೆಹರಿಸಲು ಸಾಧ್ಯವಾಗಲಿದೆ ಎಂದು ಡಿಸಿಎಫ್ ಕೆ ಸಿ. ಪ್ರಶಾಂತ್ ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com