ಮಂಗಳೂರು: ಸಮುದ್ರಕ್ಕೆ ಉರುಳಿ ಬಿದ್ದ ಕಂಟೈನರ್ ಲಾರಿ; ಚಾಲಕ ಸಾವು, ಕ್ಲೀನರ್ ನಾಪತ್ತೆ

ನ್ಯೂ ಮಂಗಳೂರು ಬಂದರಿನಲ್ಲಿ ಕಂಟೈನರ್ ಲಾರಿ ಸಮುದ್ರಕ್ಕೆ ಬಿದ್ದ ಪರಿಣಾಮ ಚಾಲಕ ಸಾವನ್ನಪ್ಪಿ ಕ್ಲೀನರ್ ನಾಪತ್ತೆಯಾಗಿರುವ ಘಟನೆ ಭಾನುವಾರ ನಡೆದಿದೆ. 
ಮೃತ ಚಾಲಕ ರಾಜೇಸಾಬ್
ಮೃತ ಚಾಲಕ ರಾಜೇಸಾಬ್
Updated on

ಮಂಗಳೂರು: ನ್ಯೂ ಮಂಗಳೂರು ಬಂದರಿನಲ್ಲಿ ಕಂಟೈನರ್ ಲಾರಿ ಸಮುದ್ರಕ್ಕೆ ಬಿದ್ದ ಪರಿಣಾಮ ಚಾಲಕ ಸಾವನ್ನಪ್ಪಿ ಕ್ಲೀನರ್ ನಾಪತ್ತೆಯಾಗಿರುವ ಘಟನೆ ಭಾನುವಾರ ನಡೆದಿದೆ. 

ಭಾನುವಾರ ನ್ಯೂ ಮಂಗಳೂರು ಪೋರ್ಟ್  14ನೇ ಬರ್ತ್ ನಲ್ಲಿ ನಡೆದ ಈ ದುರಂತದಲ್ಲಿ 26 ವರ್ಷದ ಚಾಲಕ ರಾಜೇಸಾಬ್ ನಿಯಂತ್ರಣ ತಪ್ಪಿ ವಾಹನ ಸಮುದ್ರಕ್ಕೆ ಬಿದ್ದಿದೆ. ಡೆಲ್ಟಾ ಕಂಪನಿಯ ಕ್ಲೀನರ್ ಭೀಮಪ್ಪ ನಾಪತ್ತೆಯಾಗಿದ್ದಾರೆ.

ದುರಂತ ನಡೆದ ವೇಳೆ ಲಾರಿ ಖಾಲಿಯಿತ್ತು, ಹಡಗಿನಿಂದ ಕಬ್ಬಿಣದ ಅದಿರು ತುಂಬಲು ಲಾರಿ ಬಂದರಿಗೆ ಬಂದಿತ್ತು. ದುರಂತದ ಬಗ್ಗೆ ಪೈಲಟ್ ಹಡಗು ಸಂಚಾರ ನಿರ್ವಹಣಾ ವ್ಯವಸ್ಥೆ ಗೆ ಮಾಹಿತಿ ನೀಡಿದ್ದಾರೆ.

ಸಿಐಎಸ್ಎಫ್ ಕ್ಯೂಆರ್ ಟಿ ಪಡೆಗಳ ಗಸ್ತು ತಂಡ ಟಗ್ ಬೋಟ್‌ನಲ್ಲಿ ಅಪಘಾತದ ಸ್ಥಳವನ್ನು ತಲುಪಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಅಪಘಾತ ಸಂಭವಿಸಿದ ಒಂದು ಗಂಟೆಯ ನಂತರ ರಾಜೇಸಾಬ್ ಪತ್ತೆಯಾಗಿದ್ದಾನೆ. ಅವರನ್ನು ಎಜೆ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಆತ ಮೃತಪಟ್ಟಿರುವುದಾಗಿ ಘೋಷಿಸಿದರು. ಕ್ಲೀನರ್ ಭೀಮಪ್ಪ ಇನ್ನೂ ಪತ್ತೆಯಾಗಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com