ನೆಲಮಂಗಲ ಬಳಿ ಭೀಕರ ಅಪಘಾತ: ಆ್ಯಂಬುಲೆನ್ಸ್ ಚಾಲಕ ಸೇರಿ ಮೂವರ ದುರ್ಮರಣ

ತುಮಕೂರಿನಿಂದ ಬೆಂಗಳೂರು ಕಡೆ ರೋಗಿಯನ್ನು ಕರೆದುಕೊಂಡು ಹೊರಟ ಆಂಬ್ಯುಲೆನ್ಸ್​ವೊಂದು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನೆಲಮಂಗಲ: ತುಮಕೂರಿನಿಂದ ಬೆಂಗಳೂರು ಕಡೆ ರೋಗಿಯನ್ನು ಕರೆದುಕೊಂಡು ಹೊರಟ ಆಂಬ್ಯುಲೆನ್ಸ್​ವೊಂದು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ.

ತುರ್ತು ಚಿಕಿತ್ಸೆಗಾಗಿ ರೋಗಿಯನ್ನು ತುಮಕೂರಿನಿಂದ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆಯಲ್ಲಿ ಆಂಬ್ಯುಲೆನ್ಸ್ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಆಂಬ್ಯುಲೆನ್ಸ್​ನಲ್ಲಿದ್ದ 6 ಮಂದಿ ಹೊತ್ತಿ ಉರಿಯುತ್ತಿದ್ದ ವಾಹನದಲ್ಲಿ ಸಿಲುಕಿಕೊಂಡಿದ್ದು, ಸುಟ್ಟುಗಾಯಗೊಂಡಿದ್ದ  ಇಬ್ಬರು ಹಾಗೂ ಆ್ಯಂಬುಲೆನ್ಸ್ ಚಾಲಕ ಸಾವಿಗೀಡಾಗಿದ್ದಾರೆ.

ಹಸೀನಾ, ಚಾಂದಿನಿ, ಸಾದಿಕ್ ಮೃತ ದುರ್ದೈವಿಗಳು. ಮೂಲದ ಪಾರ್ಶ್ವವಾಯು ರೋಗಿಗಳಾದ ಹಸೀನಾ ಎಂಬುವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್​ಗೆ ಓಮ್ನಿ ಆಂಬ್ಯುಲೆನ್ಸ್​ನಲ್ಲಿ ಕರೆದುಕೊಂಡು ಸಂಬಂಧಿಕರು ಹೊರಟ್ಟಿದ್ದರು. ಅತಿ ವೇಗದಲ್ಲಿದ್ದ ಆಂಬ್ಯುಲೆನ್ಸ್ ಲಾರಿಗೆ ಡಿಕ್ಕಿ ಹೊಡೆದಿದೆ.  

ನೆಲಮಂಗಲದ ಎಡೆಹಳ್ಳಿ ಸಮೀಪ ಅಪಘಾತ ಸಂಭವಿಸಿದೆ, ನೆಲಮಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com