ದಾವಣಗೆರೆ: ಶಿವಮೊಗ್ಗ ರಸ್ತೆಯ ಹರಿಹರದ ಬಳಿಯ ಡಾಬಾದಿಂದ ಸುಮಾರು 67 ಕೆಜಿ ಪಂಗೋಲಿನ್ ಚಿಪ್ಪುಗಳನ್ನು ಸಾಗಿಸುತ್ತಿದ್ದ ಅಂತರ ಜಿಲ್ಲಾ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.
ಅಕ್ರಮದ ಬಗ್ಗೆ ಮಾಹಿತಿ ಪಡೆದ ಡಿಸಿಆರ್ಬಿ ಡಿಎಸ್ಪಿ ಬಿ.ಎಸ್.ಬಸವರಾಜು ಮತ್ತು ತಂಡ ಶಿವಬಸವ ಡಾಬಾ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಎರಡು ವ್ಯಾನ್ಗಳಲ್ಲಿ ಪ್ಯಾಂಗೋಲಿನ್ ಸ್ಕೇಲ್ ಸಾಗಿಸುತ್ತಿರುವುದು ಪತ್ತೆಯಾಗಿದೆ. ಇದರೊಂದಿಗೆ 18 ಮಂದಿಯನ್ನು ಬಂಧಿಸಲಾಗಿದೆ.
ಆರೋಪಿಗಳ ವಿರುದ್ಧ ವನ್ಯಜೀವಿ (ರಕ್ಷಣೆ) ಕಾಯ್ದೆ, 1972 ರ ಅಡಿಯಲ್ಲಿ ಪ್ರಕರಣವನ್ನು ಸಹ ದಾಖಲಿಸಲಾಗಿದೆ. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಚೀನಾ ಔಷಧಿಗೆ ಮುಳ್ಳುಹಂದಿ ಚಿಪ್ಪು ಬಳಕೆ ಮಾಡುವುದರಿಂದ ಪ್ರಪಂಚದಾದ್ಯಂತ ದೊಡ್ಡ ಪ್ರಮಾಣದಲ್ಲಿ ಈ ದಂಧೆ ನಡೆಯುತ್ತಿದ್ದು, ಹೀಗಾಗಿ ಅಳಿವಿನಂಚಿನಲ್ಲಿರುವ ಈ ಸಸ್ತನಿಯನ್ನು ರಕ್ಷಿಸಬೇಕಾಗಿದೆ.
Advertisement