ಸ್ಯಾಂಡಲ್ ವುಡ್ ಸಮಸ್ಯೆ ಪರಿಹಾರಕ್ಕೆ ಗೃಹಸಚಿವರಿಗೆ ಕೆಎಫ್‍ಸಿಸಿ ಮನವಿ

ಚಂದನವನದಲ್ಲಿ ಪೈರಸಿ ಸೇರಿದಂತೆ ಹಲವು ಸಮಸ್ಯೆಗಳಿದ್ದು, ಈ ಕುರಿತು ಗೃಹ ಸಚಿವರೊಡನೆ ಚರ್ಚಿಸಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ಧರಿಸಿದೆ.
ಸ್ಯಾಂಡಲ್ ವುಡ್ ಸಮಸ್ಯೆ ಪರಿಹಾರಕ್ಕೆ ಗೃಹಸಚಿವರಿಗೆ ಕೆಎಫ್‍ಸಿಸಿ ಮನವಿ
ಸ್ಯಾಂಡಲ್ ವುಡ್ ಸಮಸ್ಯೆ ಪರಿಹಾರಕ್ಕೆ ಗೃಹಸಚಿವರಿಗೆ ಕೆಎಫ್‍ಸಿಸಿ ಮನವಿ
Updated on

ಬೆಂಗಳೂರು: ಚಂದನವನದಲ್ಲಿ ಪೈರಸಿ ಸೇರಿದಂತೆ ಹಲವು ಸಮಸ್ಯೆಗಳಿದ್ದು, ಈ ಕುರಿತು ಗೃಹ ಸಚಿವರೊಡನೆ ಚರ್ಚಿಸಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ಧರಿಸಿದೆ.

ಈ ಸಂಬಂಧ ಬುಧವಾರ ರಾಜ್ಯದ ಗೃಹ ಸಚಿವ ಅರಗ ಜ್ಞಾನೇಂದ್ರ ರವರನ್ನು ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ಭೇಟಿ ಮಾಡಿ ಉದ್ಯಮದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಅವಕಾಶಕ್ಕೆ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಎನ್ ಎಂ ಸುರೇಶ್, ಉಮೇಶ್ ಬಣಕಾರ್, ನಾಗಣ್ಣ ಸಾ ರಾ ಗೋವಿಂದು ಮತ್ತಿತರರು ಉಪಸ್ಥಿತರಿದ್ದರು. ಕಳೆದ ವಾರವಷ್ಟೆ ತೆರೆ ಕಂಡಿರುವ ಡಾ. ರಾಜ್ ಕುಮಾರ್ ಮೊಮ್ಮಗಳು ಧನ್ಯಾ ರಾಮ್ ಕುಮಾರ್ ಹಾಗೂ ಸೂರಜ್ ಗೌಡ ಅಭಿನಯದ "ನಿನ್ನ ಸನಿಹಕೆ" ಸಿನಿಮಾ ಪೈರಸಿ ಆಗಿದ್ದು ಟೆಲಿಗ್ರಾಮ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ.

ಅಲ್ಲದೆ ಲೂಸ್ ಮಾದ ಯೋಗೇಶ್ ನಟಿಸಿರೋ ಲಂಕೆ, ಅಜಯ್ ರಾವ್ ಅಭಿನಯದ ಕೃಷ್ಣ ಟಾಕೀಸ್ ಹಾಗೂ ನಟ ಚೇತನ್ ಚಂದ್ರ ಅಭಿನಯಿಸಿರೋ ಶಾರ್ದೂಲ ಚಿತ್ರ ಕೂಡ ಪೈರಸಿಯಾಗಿದೆ. ಕೇವಲ ಪೈರಸಿ ಮಾತ್ರವಲ್ಲದೆ ಇನ್ನಿತರ ಸಮಸ್ಯೆಗಳ ಚರ್ಚಿಸಲು ಕರ್ನಾಟಕ ವಾಣಿಜ್ಯ ಮಂಡಳಿ ಮುಂದಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com