ಬೆಂಗಳೂರು: ಕೆ.ಎಸ್.ಆರ್.ಟಿ.ಸಿ. ನೌಕರರಿಗೆ ಆರನೇ ವೇತನ ಆಯೋಗದನುಸಾರ ವೇತನ ಜಾರಿಗೊಳಿಸದಿರುವ ವೈಜ್ಞಾನಿಕ ಕಾರಣವನ್ನು ನೀಡಬೇಕೆಂದು ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್ ನಾಳೆ ಕೂಡ ಸಾರಿಗೆ ನೌಕರರ ಮುಷ್ಕರ ಮುಂದುವರಿಯಲಿದೆ. ಆರನೇ ವೇತನ ಆಯೋಗದ ಪ್ರಕಾರ ವೇತನ ಏಕೆ ಹೆಚ್ಚಿಸಲು ಸಾಧ್ಯವಿಲ್ಲ ಎನ್ನುವ ಕಾರಣವನ್ನು ಸರ್ಕಾರ ನೀಡಬೇಕು ಎಂದು ಅವರು ಹೇಳಿದ್ದಾರೆ.
ತಮ್ಮ ಕರ್ತವ್ಯವನ್ನು ಪುನರಾರಂಭಿಸದ ನೌಕರರಿಗೆ ಮಾರ್ಚ್ ವೇತನ ಪಾವತಿ ವಿಳಂಬ ಮಾಡುತ್ತಿರುವುದಕ್ಕಾಗಿ ಸರ್ಕಾರದ ಮೇಲೆ ಆಕ್ರೋಶ ವ್ಯಕ್ತಪಡಿಸಿದ ಅವರು ನೌಕರರು ಯುಗಾದಿ ಹಬ್ಬವನ್ನು ಹೇಗೆ ಆಚರಿಸಬೇಕು ಎಂದು ಕೇಳಿದರು.
ಸಮಾಜದ ಬಗ್ಗೆ ಕಾಳಜಿ ಇದ್ದವರೇ ನಿಜವಾದ ನಾಯಕ: ಸುರೇಶ್ ಕುಮಾರ್
ನಾಯಕನಾದವರಿಗೆ ಸಮಾಜದ ಬಗ್ಗೆ ನಿಜವಾದ ಕಾಳಜಿ, ಅಂತಃಕರಣ ಇರಬೇಕು, ಹಾಗಿಲ್ಲದೆ ಕೇವಲ ನಾನು ನಾಯಕತ್ಚ ವಹಿಸಿದ್ದೇನೆ ಜನರಿಗೆ ಏನೇ ತೊಂದರೆಯಾದರೂ ಅಡ್ಡಿ ಇಲ್ಲ ಎನ್ನುವವರು ನಿಜವಾದ ನಾಯಕರಲ್ಲ ಎಂದು ಶಿಕ್ಷಣ ಸಚಿವ ಎನ್. ಸುರೇಶ್ ಕುಮಾರ್ ಹೇಳೀದ್ದಾರೆ.
Advertisement