ಕೆಂಗೇರಿ ಮಾರ್ಗದಲ್ಲಿ ಮೆಟ್ರೋ ಮತ್ತು ರೈಲ್ವೆ ನಿಲ್ದಾಣಗಳ ಸಂಪರ್ಕ: ಮೈಸೂರು-ಸುತ್ತಮುತ್ತಲ ಜಿಲ್ಲೆಗಳ ಪ್ರಯಾಣಿಕರಿಗೆ ಅನುಕೂಲ
ಮೆಟ್ರೊದ ಮೈಸೂರು ರಸ್ತೆ-ಕೆಂಗೇರಿ ಮಾರ್ಗವನ್ನು ತೆರೆಯುವುದರಿಂದ ಮೈಸೂರು ಮತ್ತು ನೆರೆಯ ಪಟ್ಟಣಗಳು ಮತ್ತು ಬೆಂಗಳೂರು ನಡುವೆ ಕಚೇರಿಗೆ, ದಿನನಿತ್ಯ ಕೆಲಸ-ಕಾರ್ಯಗಳಿಗೆ ಪ್ರಯಾಣಿಸುವವರಿಗೆ ಅನುಕೂಲವಾಗಲಿದೆ.
Published: 26th August 2021 02:49 PM | Last Updated: 26th August 2021 03:33 PM | A+A A-

ಕೆಂಗೇರಿ ರೈಲ್ವೆ ನಿಲ್ದಾಣ
ಬೆಂಗಳೂರು: ಮೆಟ್ರೊದ ಮೈಸೂರು ರಸ್ತೆ-ಕೆಂಗೇರಿ ಮಾರ್ಗವನ್ನು ತೆರೆಯುವುದರಿಂದ ಮೈಸೂರು ಮತ್ತು ನೆರೆಯ ಪಟ್ಟಣಗಳು ಮತ್ತು ಬೆಂಗಳೂರು ನಡುವೆ ಕಚೇರಿಗೆ, ದಿನನಿತ್ಯ ಕೆಲಸ-ಕಾರ್ಯಗಳಿಗೆ ಪ್ರಯಾಣಿಸುವವರಿಗೆ ಅನುಕೂಲವಾಗಲಿದೆ. ಆದಾಗ್ಯೂ, ಹೊಸ ಮೆಟ್ರೋ ನಿಲ್ದಾಣಗಳು ಮತ್ತು ಅವುಗಳ ಸುತ್ತಮುತ್ತಲಿನ ರೈಲ್ವೇ ನಿಲ್ದಾಣಗಳ ನಡುವೆ ಸುಲಭವಾದ ಪಾದಚಾರಿ ಪ್ರವೇಶಕ್ಕಾಗಿ ಮೂಲಸೌಕರ್ಯಗಳನ್ನು ಸ್ಥಾಪಿಸುವುದು ಮುಖ್ಯವಾಗಿದೆ.
ಈ ಮಟ್ರೊ ರೈಲು ಸಂಚಾರ ಆರಂಭದಿಂದ ಬೆಂಗಳೂರು ಮತ್ತು ಮೈಸೂರು ನಡುವಿನ ಪ್ರಯಾಣಿಕರು ಮತ್ತು ಸುತ್ತಮುತ್ತಲಿನ ನಿವಾಸಿಗಳು ಹೆಚ್ಚಿನ ಪ್ರಯೋಜನವನ್ನು ಪಡೆಯುತ್ತಾರೆ. ಮೈಸೂರು ರಸ್ತೆಯ ರಸ್ತೆ ಸಂಚಾರವನ್ನು ಮೆಟ್ರೋ ಬಳಸಿ ಬೈಪಾಸ್ ಮಾಡಬಹುದು, ಆದರೆ ಇಲ್ಲಿ ಮೂಲಸೌಕರ್ಯ ಕೊರತೆಯಿದೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರತಿನಿಧಿ ಜೊತೆ ಮಾತನಾಡಿದ, ರೈಲು ಕಾರ್ಯಕರ್ತ ಮತ್ತು ಮೈಸೂರು ಗ್ರಾಹಕರ ಪರಿಷತ್ ಬಳಕೆದಾರ ಎಸ್. ಯೋಗೇಂದ್ರ, ಜ್ಞಾನಭಾರತಿ ಮೆಟ್ರೋ ಮತ್ತು ರೈಲು ನಿಲ್ದಾಣಗಳು ಸಂಪರ್ಕ ಹೊಂದಿವೆ ಆದರೆ ಕೆಲವು ರೈಲುಗಳು ಮಾತ್ರ ಈ ನಿಲ್ದಾಣದಲ್ಲಿ ನಿಲುಗಡೆ ಹೊಂದುತ್ತವೆ. ಕೆಂಗೇರಿ ಬಸ್ ನಿಲ್ದಾಣದ ಎರಡು ಮೆಟ್ರೋ ನಿಲ್ದಾಣಗಳು ಹಾಗೂ ಕೆಂಗೇರಿ ಹಾಗೂ ನಾಯಂಡಹಳ್ಳಿ ಪರಸ್ಪರ ಸಂಬಂಧದಿಂದ 800 ಮೀಟರ್ ದೂರದಲ್ಲಿರುವ ಆಯಾ ರೈಲ್ವೇ ನಿಲ್ದಾಣಗಳೊಂದಿಗೆ ಸಂಪರ್ಕ ಹೊಂದಿಲ್ಲ. ಅವುಗಳನ್ನು ಪ್ರವೇಶಿಸಲು ದಾಟಬೇಕಾದ ರಸ್ತೆ ಕಿರಿದಾದ ಹಾದಿ ನೈರ್ಮಲ್ಯವಾಗಿಲ್ಲ ಮತ್ತು ಪ್ರಯಾಣಿಕರಿಗೆ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಜ್ಞಾನಭಾರತಿ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸುವುದು ಪ್ರಯಾಣಿಕರಿಗೆ ಅನುಕೂಲವಾಗಬಹುದು ಎಂದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮತ್ತು ಮೈಸೂರು ನಡುವೆ ಪ್ರತಿದಿನ 30 ಜೋಡಿ ರೈಲುಗಳು ಸಂಚರಿಸುತ್ತವೆ. ಅವುಗಳಲ್ಲಿ 25 ಜೋಡಿಗಳು ಕೆಂಗೇರಿಯಲ್ಲಿ ನಿಲ್ಲುತ್ತವೆ ಮತ್ತು ಎರಡು ಜೋಡಿ ಮೆಮು ರೈಲುಗಳು ಜ್ಞಾನಭಾರತಿ ರೈಲು ನಿಲ್ದಾಣದಲ್ಲಿ ನಿಲ್ಲುತ್ತವೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.
ಕೆಂಗೇರಿ ಬಸ್ ಟರ್ಮಿನಲ್ ಮೆಟ್ರೋ ನಿಲ್ದಾಣವು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಯಿಂದ ಕೇವಲ 100 ಮೀಟರ್ ದೂರದಲ್ಲಿದೆ, ಕೆಂಗೇರಿ ಟಿಟಿಎಂಸಿ ಬಸ್ ನಿಲ್ದಾಣವು ಕೆಎಸ್ ಆರ್ ಟಿಸಿ ಕೊಲ್ಲಿಯನ್ನು ಹೊಂದಿದ್ದು, ಇಲ್ಲಿಯವರೆಗೆ ಸಂಪರ್ಕ ಸೇತುವೆ ಇಲ್ಲ. ವಿನ್ಯಾಸ ಸಿದ್ದವಾಗಿದ್ದು ಆದಷ್ಟು ಶೀಘ್ರ ಫೂಟ್ ಓವರ್ ಬ್ರಿಡ್ಜ್ ಸದ್ಯದಲ್ಲಿಯೇ ಕಾರ್ಯನಿರ್ವಹಣೆಗೆ ಬರಲಿದೆ. ಮೆಟ್ರೊ ರೈಲಿಗೆ ಬಹು ವಿಧಾನ ಇಂಟಗ್ರೇಶನ್ ಆದ್ಯತೆಯಾಗಿದೆ ಎಂದು ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ತಿಳಿಸಿದ್ದಾರೆ.