ಚಿಕ್ಕಬಳ್ಳಾಪುರ: ನವಜಾತ ಹೆಣ್ಣುಮಗುವನ್ನು ಕೊಂದ ಪೋಷಕರ ಬಂಧನ

ಚಿಂತಾಮಣಿ ಸರ್ಕಾರಿ ಆಸ್ಪತ್ರೆಯ ಶೌಚಾಲಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ನವಜಾತ ಹೆಣ್ಣು ಮಗುವಿನ  ಪೋಷಕರನ್ನು ಚಿಂತಾಮಣಿ ಪೊಲೀಸರು ಸೋಮವಾರ ಮುಂಜಾನೆ ಬಂಧಿಸಿದ್ದಾರೆ. 
ಹೆತ್ತ ಕಂದಮ್ಮನನ್ನು ಕೊಂದ ದಂಪತಿಗಳು
ಹೆತ್ತ ಕಂದಮ್ಮನನ್ನು ಕೊಂದ ದಂಪತಿಗಳು

ಚಿಕ್ಕಬಳ್ಳಾಪುರ:  ಚಿಂತಾಮಣಿ ಸರ್ಕಾರಿ ಆಸ್ಪತ್ರೆಯ ಶೌಚಾಲಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ನವಜಾತ ಹೆಣ್ಣು ಮಗುವಿನ  ಪೋಷಕರನ್ನು ಚಿಂತಾಮಣಿ ಪೊಲೀಸರು ಸೋಮವಾರ ಮುಂಜಾನೆ ಬಂಧಿಸಿದ್ದಾರೆ. 

ಬಾಗೇಪಲ್ಲಿ ತಾಲ್ಲೂಕಿನ ಚಾಕುವಲಹಳ್ಳಿಯ ನಿವಾಸಿಗಳಾದ ಮಮತಾ (28) ಮತ್ತು ಪತಿ ವೇಣುಗೋಪಾಲ್ ರೆಡ್ಡಿ (40) ಆರೋಪಿಗಳಾಗಿದ್ದಾರೆ ಎಂದು ಚಿಕ್ಕಬಳ್ಳಾಪುರ  ಎಸ್ಪಿ ಜಿ ಕೆ ಮಿಥುನ್ ಕುಮಾರ್ ತಿಳಿಸಿದ್ದಾರೆ.  ಪೊಲೀಸ್ ತಂಡವು ವಿವಿಧ ಕೋನಗಳಲ್ಲಿ ತನಿಖೆ ಮಾಡಿದೆ. ಸಿ.ಸಿ.ಟಿ.ವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಿ, ಅಪರಾಧಿಗಳ ಬಗ್ಗೆ ಶೋಧನೆ ನಡೆಸಲಾಗಿದೆ ಎಂದರು.

ದಂಪತಿಗೆ ಆರು ವರ್ಷದ ಮಗನಿದ್ದಾನೆ, ಮತ್ತು ಮಮತಾ ಮತ್ತೆ ಗರ್ಭಧರಿಸಿದಾಗ, ಅವಳು ತನ್ನ ಗಂಡ ಅಥವಾ ಅಳಿಯಂದಿರಿಗೆ ಮಾಹಿತಿ ನೀಡಿರಲಿಲ್ಲ, ಪತಿ ಇತ್ತೀಚೆಗೆ ಗರ್ಭಧಾರಣೆಯ ಬಗ್ಗೆ ತಿಳಿದುಕೊಂಡರು. ಶನಿವಾರ, ಅವಳು ಹೆರಿಗೆಗೆ ಹೋದಾಗ, ಅವರು ಆಸ್ಪತ್ರೆಗೆ ಆಗಮಿಸಿದ್ದಾರೆ. ಆ ವೇಳೆ ಮಮತಾ  ಶೌಚಾಲಯಕ್ಕೆ ಹೋದಳು, ಅಲ್ಲಿ ಅವಳು ಅಕಾಲಿಕವಾಗಿ 8 ತಿಂಗಳ ಶಿಶುವಿಗೆ ಜನ್ಮ ನೀಡೀದ್ದಾಳೆ.

ಇದು ಹೆಣ್ಣು ಮಗುವಾಗಿದ್ದರಿಂದ ಮತ್ತು ಕುಟುಂಬಕ್ಕೆ ಮಾಹಿತಿ ನೀಡದ ಕಾರಣ ದಂಪತಿಗಳು ಮಗುವನ್ನು ಕೊಲ್ಲಲು ನಿರ್ಧರಿಸಿದರು. ಅವರು ಮಗುವನ್ನು ದಪ್ಪ ಹಗ್ಗದಿಂದ  ದ ನೇಣು ಹಾಕಿ ಆಸ್ಪತ್ರೆಯಿಂದ ಹೊರಬಂದರು. ಪ್ರಸ್ತುತ ವೇಣುಗೋಪಾಲ್ ರೆಡ್ಡಿ ಅವರ ಕುಟುಂಬವನ್ನು ಪೊಲೀಸರು ಪ್ರಶ್ನಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com