ಬೆಂಗಳೂರು: ಲಾಕ್ ​ಡೌನ್​ನಲ್ಲಿ ಹಣ ಮಾಡಲು ದ್ವಿಚಕ್ರ ವಾಹನ ಕದಿಯುತ್ತಿದ್ದ ಮೂವರ ಸೆರೆ

ಲಾಕ್ ​ಡೌನ್​ನಲ್ಲಿ ಹಣಗಳಿಸಲು ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಜೆ.ಜೆ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ವಾಹನ ಕಳ್ಳರು
ಬಂಧಿತ ವಾಹನ ಕಳ್ಳರು

ಬೆಂಗಳೂರು: ಲಾಕ್​ ಡೌನ್​ನಲ್ಲಿ ಹಣಗಳಿಸಲು ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಜೆ.ಜೆ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಕಬೀರ್ (20), ರೋಷನ್ (20), ಅಸ್ಟರ್ ಪಾಷಾ (20) ಬಂಧಿತ ಆರೋಪಿಗಳು.

ಬಂಧಿತರಿಂದ 4 ಲಕ್ಷ ರೂ ಮೌಲ್ಯದ ಆರು ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ಜೆ.ಜೆ ನಗರ, ಕೆಂಗೇರಿ, ಕುಂಬಳಗೋಡು, ಸಿಟಿ ಮಾರ್ಕೇಟ್, ವಿಜಯನಗರ ಸೇರಿ ನಗರದ ವಿವಿಧೆಡೆ ದ್ವಿಚಕ್ರ ವಾಹನ​ ಕದ್ದು ಪರಾರಿಯಾಗುತ್ತಿದ್ದರು. ಘಟನೆಗೆ ಸಂಬಂಧಿಸಿದಂತೆ ಸರಣಿ ದೂರು ದಾಖಲಾಗುತ್ತಿದ್ದಂತೆ ಪೊಲೀಸರು ತನಿಖೆ ಚುರುಗೊಳಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com