ವಿಜಯನಗರ: ನಿವೃತ್ತಿ ದಿನವೇ ಕೊರೋನಾಗೆ ಪಿಎಸ್ಐ ಬಲಿ

ತಮ್ಮ ನಿವೃತ್ತಿ ದಿನವೇ ಹೊಸಪೇಟೆ ಪಟ್ಟಣ ಠಾಣೆ ಪಿಎಸ್ಐ ಓರ್ವರು ಕೊರೋನಾಗೆ ಬಲಿಯಾಗಿದ್ದಾರೆ.
ಪೊಲೀಸರು
ಪೊಲೀಸರು

ವಿಜಯನಗರ: ತಮ್ಮ ನಿವೃತ್ತಿ ದಿನವೇ ಹೊಸಪೇಟೆ ಪಟ್ಟಣ ಠಾಣೆ ಪಿಎಸ್ಐ ಓರ್ವರು ಕೊರೋನಾಗೆ ಬಲಿಯಾಗಿದ್ದಾರೆ.

ಮೃತರನ್ನು 60 ವರ್ಷದ ಯಲ್ಲಪ್ಪ ಎಂದು ತಿಳಿದುಬಂದಿದೆ. ಮೂಲತಃ ಕೊಪ್ಪಳ ಜಿಲ್ಲೆಯ ಕುಷ್ಟಗಿಯವರಾಗಿದ್ದ ಅವರು ಕುಟುಂಬದೊಂದಿಗೆ ತಾಲ್ಲೂಕಿನ ಕೊಂಡನಾಯಕನಹಳ್ಳಿಯಲ್ಲಿ ವಾಸವಾಗಿದ್ದರು. 

ವಾರದ ಹಿಂದೆ ಯಲ್ಲಪ್ಪ ಅವರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಬಳಿಕ ಅವರನ್ನು ಕೊಪ್ಪಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡುತ್ತಿದ್ದರು ಚಿಕಿತ್ಸೆ ಫಲಕಾರಿಯಾಗದೆ ಅವರು ಬುಧವಾರ ನಸುಕಿನ ಜಾವ ಮೃತಪಟ್ಟಿದ್ದಾರೆ.

ಬುಧವಾರ ಯಲ್ಲಪ್ಪ ಅವರು ಕರ್ತವ್ಯದಿಂದ ನಿವೃತ್ತಿ ಹೊಂದಲಿದ್ದರು. ಮೃತರು ಪತ್ನಿ, ಇಬ್ಬರೂ ಗಂಡು ಮಕ್ಕಳನ್ನು ಅಗಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com