ಸತತ ಮಳೆಯಿಂದಾಗಿ ಚಿಕ್ಕಮಗಳೂರಿನಲ್ಲಿ ಭೂಕುಸಿತ

ಮುಳ್ಳಯ್ಯನಗಿರಿ, ಚಂದ್ರದ್ರೋಣ ಶ್ರೇಣಿಗಳ ಗುಡ್ಡಗಾಡು ಪ್ರದೇಶಗಳಲ್ಲಿ  ಅಕ್ಟೋಬರ್21 ರಿಂದ ಭಾರೀ ಮಳೆಯಾಗುತ್ತಿದೆ. ಹೀಗಾಗಿ ಮೊದಲ ಬಾರಿಗೆ, ಪ್ರವಾಸಿ ಸ್ಥಳಗಳಿಗೆ ಹೋಗುವ ರಸ್ತೆಗಳಲ್ಲಿ ಭೂಕುಸಿತ ಸಂಭವಿಸಿದ ವರದಿಯಾಗಿದೆ
ಮುಳ್ಳಯ್ಯನಗಿರಿ (ಸಂಗ್ರಹ ಚಿತ್ರ)
ಮುಳ್ಳಯ್ಯನಗಿರಿ (ಸಂಗ್ರಹ ಚಿತ್ರ)

ಚಿಕ್ಕಮಗಳೂರು: ಮುಳ್ಳಯ್ಯನಗಿರಿ, ಚಂದ್ರದ್ರೋಣ ಶ್ರೇಣಿಗಳ ಗುಡ್ಡಗಾಡು ಪ್ರದೇಶಗಳಲ್ಲಿ  ಅಕ್ಟೋಬರ್21 ರಿಂದ ಭಾರೀ ಮಳೆಯಾಗುತ್ತಿದೆ. ಹೀಗಾಗಿ ಮೊದಲ ಬಾರಿಗೆ, ಪ್ರವಾಸಿ ಸ್ಥಳಗಳಿಗೆ ಹೋಗುವ ರಸ್ತೆಗಳಲ್ಲಿ ಭೂಕುಸಿತ ಸಂಭವಿಸಿದ ವರದಿಯಾಗಿದೆ. 

ಹೊನ್ನಮ್ಮನಹಳ್ಳ ಜಲಪಾತದ ಸುತ್ತಮುತ್ತ ವರದಿಯಾಗಿರುವ ಭೂಕುಸಿತಗಳ ನೆರಳಿನಲ್ಲೇ ಮುಚ್ಚಿ, ಕವಿಕಲ್ ಗಂಡಿ ರಸ್ತೆಯ ತಿರುವಿನಲ್ಲಿ ದೊಡ್ಡ ಭೂಕುಸಿತ ಸಂಭವಿಸಿದೆ. 

ರಸ್ತೆಯ ಕೊನೆಯ ಭಾಗದಿಂದ ಸಪೋರ್ಟ್ ರೈಲಿಂಗ್‌ಗಳು ಇಳಿಜಾರಿನಲ್ಲಿ ಕೊಚ್ಚಿಹೋಗಿವೆ, ಹೀಗಾಗಿ ರಸ್ತೆ ಮಾರ್ಗವು ಕಿರಿದಾಗುತ್ತಿದೆ ಮತ್ತು ದಾರಿಯಲ್ಲಿ ಸವಾರಿ ಮಾಡುವ ವಾಹನ ಸವಾರರಿಗೆ ಅಪಾಯವನ್ನುಂಟುಮಾಡುತ್ತದೆ.

ಕಾಫಿ ತೋಟಗಳ ಮಧ್ಯೆ ತುಂಬಿ ಹರಿಯುತ್ತಿರುವ ತೊರೆಗಳು ಕೂಡ ಬೆಳೆಗೆ ಹಾನಿ ಮಾಡುತ್ತಿದೆ. ವಿವಿಧ ರಸ್ತೆಗಳಲ್ಲಿ ಚೆಕ್ ಗೋಡೆಗಳು ಕುಸಿದಿವೆ.  ಅರಣ್ಯ ಅಧಿಕಾರಿಗಳು, ಪಿಡಬ್ಲ್ಯೂಡಿ ಮತ್ತು ಸಿಎಮ್‌ಸಿ ಆಯುಕ್ತ ಬಸವರಾಜ್ ಅವರು ಭೂಕುಸಿತದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಹಿರೇಮಗಳೂರಿನಲ್ಲಿ ದಿನಗೂಲಿ ಕಾರ್ಮಿಕ ಪರಮೇಶ್ವರಪ್ಪ ಎಂಬುವರ ಮನೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮಲೆನಾಡಿನಲ್ಲಿ ಮಳೆ ಮುಂದುವರಿದಿದ್ದು, ಕಾಫಿ, ಅಡಿಕೆ ಮತ್ತಿತರರ ಬೆಳೆಗಾರರಿಗೆ ಅನಾನುಕೂಲ ಉಂಟಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com