ಬಳ್ಳಾರಿ: ತುಂಗಭದ್ರಾ ನದಿ ದಾಟುವಾಗ ಮೊಸಳೆ ಬಾಯಿಗೆ ಸಿಕ್ಕಿದ 38 ವರ್ಷದ ರೈತ ಸಾವು

ಮೊಸಳೆ ದಾಳಿ ನಡೆಸಿ 38 ವರ್ಷದ ರೈತ ಮೃತಪಟ್ಟ ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನಲ್ಲಿ ಕಳೆದ ಸಂಜೆ ಸಂಭವಿಸಿದೆ.
ರೈತ ಮೃತಪಟ್ಟ ಸ್ಥಳದಲ್ಲಿ ಪೊಲೀಸರ ಪರಿಶೀಲನೆ
ರೈತ ಮೃತಪಟ್ಟ ಸ್ಥಳದಲ್ಲಿ ಪೊಲೀಸರ ಪರಿಶೀಲನೆ

ಬಳ್ಳಾರಿ: ಮೊಸಳೆ ದಾಳಿ ನಡೆಸಿ 38 ವರ್ಷದ ರೈತ ಮೃತಪಟ್ಟ ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನಲ್ಲಿ ಕಳೆದ ಸಂಜೆ ಸಂಭವಿಸಿದೆ.

ಮೃತ ರೈತನನ್ನು ವೀರೇಶ್ ಕೆ ಎಂದು ಗುರುತಿಸಲಾಗಿದ್ದು ತುಂಗಭದ್ರ ನದಿ ದಾಟುವ ವೇಳೆ ಮೊಸಳೆ ದಾಳಿ ನಡೆಸಿ ಈ ದುರ್ಘಟನೆ ನಡೆದಿದೆ. ಮೊಸಳೆ ಬಾಯಿಯಿಂದ ಮೃತ ರೈತನನ್ನು ಪೊಲೀಸರು ಹೊರಗೆ ಎಳೆದಿದ್ದಾರೆ. ಆದರೆ ಅಷ್ಟರಲ್ಲೆ ಪ್ರಾಣಪಕ್ಷಿ ಹಾರಿಹೋಗಿತ್ತು. 

ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಬಳ್ಳಾರಿ ಜಿಲ್ಲೆಯ ತುಂಗಭದ್ರ ನದಿಯಲ್ಲಿ ಈ ರೀತಿ ಮೊಸಳೆಯ ಬಾಯಿಗೆ ಸಿಲುಕಿ ಮೃತಪಟ್ಟ ಎರಡನೇ ಘಟನೆ ಇದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com