ಪಣಂಬೂರು ಬೀಚ್ ನಲ್ಲಿ ದೋಣಿ ಮಗುಚಿ ದುರಂತ: ಓರ್ವ ಮೀನುಗಾರ ನಾಪತ್ತೆ

ಪಣಂಬೂರು ಬೀಚ್ ನಲ್ಲಿ ಮೀನುಗಾರಿಕೆ ದೋಣಿ ಮಗುಚಿದ ಪರಿಣಾಮ ಓರ್ವ ಮೀನುಗಾರ ನಾಪತ್ತೆಯಾಗಿರುವ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.
ಮಗುಚಿದ ದೋಣಿ
ಮಗುಚಿದ ದೋಣಿ

ಮಂಗಳೂರು: ಪಣಂಬೂರು ಬೀಚ್ ನಲ್ಲಿ ಮೀನುಗಾರಿಕೆ ದೋಣಿ ಮಗುಚಿದ ಪರಿಣಾಮ ಓರ್ವ ಮೀನುಗಾರ ನಾಪತ್ತೆಯಾಗಿರುವ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.

ದೋಣಿಯಲ್ಲಿ ಐವರು ಮೀನುಗಾರರಿದ್ದರು, ಶನಿವಾರ ಬೆಳಗ್ಗೆ ಮೀನಗಾರಿಕೆಗೆ ತೆರಳಿದ್ದ ವೇಳೆ ದುರಂತ ಸಂಭವಿಸಿದೆ ಎಂದು ದೋಣಿಯಲ್ಲಿದ್ದ ಇಮ್ತಿಯಾಜ್ ತಿಳಿಸಿದ್ದಾರೆ.

ನಾಪತ್ತೆಯಾಗಿರುವ ಶರೀಫ್ ಎಂಬ ಮೀನುಗಾರನಿಗಾಗಿ ರಕ್ಷಣಾ ತಂಡ ಶೋಧ ನಡೆಸುತ್ತಿದೆ. ಅಬ್ದುಲ್ ಅಜೀಜ್, ಇಮ್ತಿಯಾಜ್, ಸಿನಾನ್ ಮತ್ತು ಫೈರೋಜ್ ಎಂಬುವರನ್ನು ರಕ್ಷಿಸಲಾಗಿದೆ. ಅಜರ್ ಎಂಬಾತನಿಗೆ ಸೇರಿದ ದೋಣಿಯನ್ನು ದಡಕ್ಕೆ ತರಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com