ಧಾರವಾಡ: ರಸ್ತೆಯಲ್ಲೇ ಮಹಿಳೆಯ ಕೈಹಿಡಿದು ಎಳೆದಾಡಿದ ಜೆಡಿಎಸ್ ಮುಖಂಡ?

ಜೆಡಿಎಸ್ ಮುಖಂಡರೊಬ್ಬರ ವಿರುದ್ಧ ನಡು ರಸ್ತೆಯಲ್ಲಿ ಮಹಿಳೆಯೊಬ್ಬರ ಕೈಹಿಡಿದು ಎಳೆದಾಡಿರುವ ಆರೋಪ ಕೇಳಿಬಂದಿದೆ.
ರಸ್ತೆಯಲ್ಲಿ ಮಹಿಳೆಯ ಕೈ ಎಳೆಯುತ್ತಿರುವ ಜೆಡಿಎಸ್ ನಾಯಕ
ರಸ್ತೆಯಲ್ಲಿ ಮಹಿಳೆಯ ಕೈ ಎಳೆಯುತ್ತಿರುವ ಜೆಡಿಎಸ್ ನಾಯಕ

ಧಾರವಾಡ: ಜೆಡಿಎಸ್ ಮುಖಂಡರೊಬ್ಬರ ವಿರುದ್ಧ ನಡು ರಸ್ತೆಯಲ್ಲಿ ಮಹಿಳೆಯೊಬ್ಬರ ಕೈಹಿಡಿದು ಎಳೆದಾಡಿರುವ ಆರೋಪ ಕೇಳಿಬಂದಿದೆ.

ಘಟನೆ ಧಾರವಾಡ ನಗರದ ಸತ್ತೂರ ಬಡಾವಣೆಯಲ್ಲಿ ನಡೆದಿದ್ದು, ಈ ಆರೋಪಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ. ಜೆಡಿಎಸ್ ಮುಖಂಡ ಶ್ರೀಕಾಂತ ಜಮನಾಳ ಕೈಹಿಡಿದು ಎಳೆದಾಡಿದ ಪ್ರಕರಣದ ಆರೋಪಿಯಾಗಿದ್ದಾರೆ. 

ಶ್ರೀಕಾಂತ ಜಮನಾಳ, ಸತ್ತೂರು ನಿವಾಸಿಯಾಗಿರುವ ಮಹಿಳೆ ಮನೆಗೆ ತೆರಳಿದ್ದರು. ಈ ವೇಳೆ ಶ್ರೀಕಾಂತ ಮಹಿಳೆಯ ಕೈಹಿಡಿದು ಎಳೆದಾಡಿದ್ದಾರೆ. ಮಹಿಳೆಯ ಕೈಹಿಡಿದು ಎಳೆದಾಡಿರುವ ವಿಡಿಯೋ ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆಗೆ ಸಂಬಂಧಿಸಿದಂತೆ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com