ಮೈಸೂರು ಗ್ಯಾಂಗ್ ರೇಪ್ ಪ್ರಕರಣ: ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು; ಸಂತ್ರಸ್ತೆ ಹೇಳಿಕೆ

ಮೈಸೂರು ಸಾಮೂಹಿಕ ಅತ್ಯಾಚಾರ ಸಂತ್ರಸ್ತೆ, ಜಿಲ್ಲಾ ಅಧಿಕಾರಿಗಳ ಮುಂದೆ ನೀಡಿರುವ ಹೇಳಿಕೆಯಲ್ಲಿ, ತನ್ನನ್ನು ನ್ಯಾಯಾಂಗ ಬಂಧನದಲ್ಲಿರುವ ಆರು ಜನರು ಅತ್ಯಾಚಾರ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಸ್ಥಳ ಮಹಜರು ನಡೆಸಲು ಬಂಧಿತ ಆರೋಪಿಗಳನ್ನು ಅತ್ಯಾಚಾರ ನಡೆದ ಸ್ಥಳಕ್ಕೆ ಕರೆತಂದ ಪೊಲೀಸರು
ಸ್ಥಳ ಮಹಜರು ನಡೆಸಲು ಬಂಧಿತ ಆರೋಪಿಗಳನ್ನು ಅತ್ಯಾಚಾರ ನಡೆದ ಸ್ಥಳಕ್ಕೆ ಕರೆತಂದ ಪೊಲೀಸರು
Updated on

ಮೈಸೂರು: ಮೈಸೂರು ಸಾಮೂಹಿಕ ಅತ್ಯಾಚಾರ ಸಂತ್ರಸ್ತೆ, ಜಿಲ್ಲಾ ಅಧಿಕಾರಿಗಳ ಮುಂದೆ ನೀಡಿರುವ ಹೇಳಿಕೆಯಲ್ಲಿ, ತನ್ನನ್ನು ನ್ಯಾಯಾಂಗ ಬಂಧನದಲ್ಲಿರುವ ಆರು ಜನರು ಅತ್ಯಾಚಾರ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಘಟನೆ ನಡೆದ ದಿನ ರಾತ್ರಿ 7.30 ಕ್ಕೆ, ತಾನು ಸ್ನೇಹಿತನೊಂದಿಗೆ ವಾಕ್‌ ಮಾಡಲು ಹೋಗಿದ್ದೆ. ನಂತರ ಸ್ವಲ್ಪ ಹೊತ್ತು ಅಲ್ಲಿ ಕುಳಿತುಕೊಳ್ಳಲು ನಿರ್ಧರಿಸಿದೆವು. ಸ್ವಲ್ಪ ಸಮಯದ ನಂತರ ಸುಮಾರು 5 ರಿಂದ 6 ಜನರು ಅಲ್ಲಿಗೆ ಬಂದರು. ಇದ್ದಕ್ಕಿದ್ದಂತೆ ಅವರು ತಮ್ಮನ್ನು ಪ್ರಶ್ನಿಸಲು ಮತ್ತು ನಿಂದಿಸಲು ಆರಂಭಿಸಿದರು ಎಂದರು.

ತಾವು ಯಾವುದೇ ಉತ್ತರ ನೀಡದಿದ್ದಾಗ, ಓರ್ವ ವ್ಯಕ್ತಿ ತನ್ನ ಸ್ನೇಹಿತನನ್ನು ಕಲ್ಲಿನಿಂದ ಹೊಡೆದನು. ಆಗ ಆತ ಪ್ರಜ್ಞಾಹೀನನಾಗಿ ಕೆಳಗೆ ಬಿದ್ದನು. ನಂತರ ಅವರು ತನ್ನನ್ನು ಎತ್ತಿಕೊಂಡು ಹತ್ತಿರದ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಮಾಡಿದರು ಎಂದು ತಿಳಿಸಿದರು.

ನಂತರ ತನ್ನನ್ನು ವಾಪಸ್ ಕರೆದುಕೊಂಡು ಹೋಗಿ ಸ್ನೇಹಿತನ ಪಕ್ಕದಲ್ಲಿ ಕೂರಿಸಿದರು. ತನ್ನ ಸ್ನೇಹಿತನ ತಂದೆಗೆ ಮೊಬೈಲ್ ಫೋನ್‌ನಲ್ಲಿ ಕರೆ ಮಾಡಿದರು ಮತ್ತು 3 ಲಕ್ಷ ರೂ. ಸುಲಿಗೆ ಕೇಳಿದರು ಎಂದು ಅವರು ಹೇಳಿದರು.

ಆದರೆ, ಹಣ ತರುವುದು ವಿಳಂಬವಾದ ಹಿನ್ನೆಲೆಯಲ್ಲಿ ಮತ್ತೊಮ್ಮೆ ತಮ್ಮ ಮೇಲೆ ಹಲ್ಲೆ ಮಾಡಿ ಪರಾರಿಯಾದರು. ಸ್ವಲ್ಪ ಸಮಯದ ನಂತರ, ಸ್ನೇಹಿತನ ತಂದೆ ಕಾರಿನಲ್ಲಿ ಬಂದು ತಮ್ಮನ್ನು ಆಸ್ಪತ್ರೆಗೆ ಕರೆದೊಯ್ದರು ಎಂದು ಮಾಹಿತಿ ನೀಡಿದರು.

ಆಗಸ್ಟ್ 24 ರಂದು ಚಾಮುಂಡಿ ಬೆಟ್ಟದ ಪಕ್ಕದಲ್ಲಿರುವ ಲಲಿತಾದ್ರಿಪುರ ಗುಡ್ಡದಲ್ಲಿ 22 ವರ್ಷದ ಎಂಬಿಎ ವಿದ್ಯಾರ್ಥಿಯನ್ನು ಆರೋಪಿಗಳು ಗ್ಯಾಂಗ್ ರೇಪ್ ಮಾಡಿದ್ದಾರೆ.

ಯುವತಿ ಹೇಳಿಕೆಯಿಂದ ಕೇಸು ಮತ್ತಷ್ಟು ಬಲವಾಗಿದ್ದು, ಮುಂದಿನ ದಿನಗಳಲ್ಲಿ ಇದು ಯಾವ ರೀತಿ ವಿಚಾರಣೆಗೆ ತೆರೆದುಕೊಳ್ಳುತ್ತದೆ, ಆರೋಪಿಗಳಿಗೆ ಯಾವ ರೀತಿ ಶಿಕ್ಷೆಯಾಗುತ್ತದೆ ಎಂಬ ಕುತೂಹಲ ಮೂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com