ನೈಟ್ ಕರ್ಫ್ಯೂ ಸಮಯದಲ್ಲಿ ಗ್ರಾಹಕರಿಗೆ ಊಟ ಮಾಡಲು ಅವಕಾಶ: ಮೈಸೂರಿನಲ್ಲಿ ಹೊಟೇಲ್ ಮಾಲೀಕರ ಮೇಲೆ ಪೊಲೀಸರ ಹಲ್ಲೆ 

ರಾತ್ರಿ ಕರ್ಫ್ಯೂ ಸಮಯದಲ್ಲಿ ಗ್ರಾಹಕರಿಗೆ ಊಟ ಮಾಡಲು ಅವಕಾಶ ನೀಡಿದ್ದಕ್ಕಾಗಿ ಪೊಲೀಸರು ಮೈಸೂರಿನಲ್ಲಿ ಹೊಟೇಲ್ ಮಾಲೀಕರಿಗೆ ಹೊಡೆದಿದ್ದು ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ.
ಹೊಟೇಲ್ ನಲ್ಲಿ ಪೊಲೀಸರ ಪರಿಶೀಲನೆ
ಹೊಟೇಲ್ ನಲ್ಲಿ ಪೊಲೀಸರ ಪರಿಶೀಲನೆ

ಮೈಸೂರು: ರಾತ್ರಿ ಕರ್ಫ್ಯೂ ಸಮಯದಲ್ಲಿ ಗ್ರಾಹಕರಿಗೆ ಊಟ ಮಾಡಲು ಅವಕಾಶ ನೀಡಿದ್ದಕ್ಕಾಗಿ ಪೊಲೀಸರು ಮೈಸೂರಿನಲ್ಲಿ ಹೊಟೇಲ್ ಮಾಲೀಕರಿಗೆ ಹೊಡೆದಿದ್ದು ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ.

ಕಳೆದ ರಾತ್ರಿ ಈ ಘಟನೆ ನಡೆದಿದ್ದು ಗ್ರಾಹಕರು ನೈಟ್ ಕರ್ಫ್ಯೂ ಸಮಯದಲ್ಲಿ ಹೊಟೇಲ್ ಗೆ ಬಂದು ಊಟ ಮಾಡಿದ್ದಕ್ಕಾಗಿ ಪೊಲೀಸರು ಹೊಟೇಲ್ ಮಾಲೀಕರಿಗೆ ಹೊಡೆಯುತ್ತಿದ್ದಾರೆ. ಹೊಟೇಲ್ ಒಳಗೆ ಹೋಗಿ ಪೊಲೀಸರು ಪರಿಶೀಲನೆ ನಡೆಸಿ ಈ ಕ್ರಮಕ್ಕೆ ಮುಂದಾಗಿದ್ದಾರೆ.

ಈ ಘಟನೆಯನ್ನು ಮೈಸೂರು ಹೊಟೇಲ್ ಮಾಲೀಕರ ಸಂಘ ಖಂಡಿಸಿದ್ದು ನೈಟ್ ಕರ್ಫ್ಯೂ ಆದೇಶವನ್ನು ಹಿಂಪಡೆಯುವಂತೆ ಅಧಿಕಾರಿಗಳನ್ನು ಒತ್ತಾಯಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com