ಕಲಬುರಗಿ: ಪತ್ನಿ-ಮಗಳನ್ನು ಕೊಂದು ಪಾನಿಪುರಿ ವ್ಯಾಪಾರಿ ಪೊಲೀಸರಿಗೆ ಶರಣು

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಹೆಂಡತಿಯ ನಡತೆ ಶಂಕಿಸಿ ಪದೇ ಪದೇ ಜಗಳವಾಡುತ್ತಿದ್ದ ಪತಿ ತಡರಾತ್ರಿ ಪತ್ನಿ ಹಾಗೂ ಮಗಳನ್ನೇ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಸೇಡಂ ಪಟ್ಟಣದ ವಿಶ್ವನಗರ ಬಡಾವಣೆಯಲ್ಲಿ ನಡೆದಿದೆ.
ಕೊಲೆಯಾದ ಭವಾನಿ ಮತ್ತು ಪುತ್ರಿ
ಕೊಲೆಯಾದ ಭವಾನಿ ಮತ್ತು ಪುತ್ರಿ

ಕಲಬುರಗಿ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಹೆಂಡತಿಯ ನಡತೆ ಶಂಕಿಸಿ ಪದೇ ಪದೇ ಜಗಳವಾಡುತ್ತಿದ್ದ ಪತಿ ತಡರಾತ್ರಿ ಪತ್ನಿ ಹಾಗೂ ಮಗಳನ್ನೇ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಸೇಡಂ ಪಟ್ಟಣದ ವಿಶ್ವನಗರ ಬಡಾವಣೆಯಲ್ಲಿ ನಡೆದಿದೆ.

ಕೊಲೆ ಮಾಡಿದ ಪತಿಯನ್ನು ಪಾನಿಪುರಿ ವ್ಯಾಪಾರ ಮಾಡಿಕೊಂಡಿದ್ದ ಕಲಬುರಗಿ ನಿವಾಸಿ ದಿಗಂಬರ ಹಣಮಂತಪ್ಪ ಗಾಂಜಲಿ (47) ಎಂದು ಗುರುತಿಸಲಾಗಿದೆ. ಈತ ಬುಧವಾರ ತಡರಾತ್ರಿ ಪತ್ನಿ ಜಗದೇವಿ (35) ಹಾಗೂ ಮಗಳು ಪ್ರಿಯಾಂಕಾ (11) ಇಬ್ಬರನ್ನೂ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ.

ಕಲ್ಬುರ್ಗಿ ನಿವಾಸಿಯಾದ ಈತ ಪತ್ನಿ ಹಾಗೂ ಮಗಳ ಸಮೇತ ಈಚೆಗೆ ಸೇಡಂ ಪಟ್ಟಣಕ್ಕೆ ಬಂದು ನೆಲೆಸಿದ್ದ. ಹೊಟ್ಟೆ ಹೊರೆಯಲು ಪಾನಿಪುರಿ ವ್ಯಾಪಾರ ಮಾಡಿಕೊಂಡಿದ್ದ.

ಆದರೆ ತನ್ನ ಪತ್ನಿಯ ನಡತೆ ಸರಿಯಾಗಿಲ್ಲ ಎಂದು ಪದೇಪದೇ ಜಗಳವಾಡಿಕೊಂಡಿದ್ದ. ಆದರೆ, ಬುಧವಾರ ಜಗಳ ವಿಕೋಪಕ್ಕೆ ತೆರಳಿದಾಗ ಕಟ್ಟಿಗೆಯಿಂದ ಪತ್ನಿಯನ್ನು ಹೊಡೆದು ಸಾಯಿಸಿದ, ನಂತರ ಮಗಳನ್ನು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಳಿಕ ವಿಷಯವನ್ನು ತನ್ನ ಸಂಬಂಧಿಕರಿಗೆ ತಿಳಿಸಿ ನಂತರ ಸೇಡಂ ಠಾಣೆಗೆ ತೆರಳಿ ಪೊಲೀಸರಿಗೆ ಶರಣಾಗಿದ್ದಾನೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಪತ್ನಿಯ ಶೀಲ ಶಂಕಿಸಿ ಕೊಲೆ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಮೂಲಗಳ ಪ್ರಕಾರ, ದಿಗಂಬರ್ ರಾಮನಗರದಲ್ಲಿ ಪಾನಿಪುರಿ ಮಾರಾಟ ಮಾಡುತ್ತಿದ್ದ, ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ನಷ್ಟ ಅನುಭವಿಸಿದ್ದ. ನಂತರ ಆತ ತನ್ನ ವ್ಯಾಪಾರವನ್ನು ಸೇಡಮ್‌ಗೆ ವರ್ಗಾಯಿಸಿದ್ದನು, ಅವನ ಕುಟುಂಬವು ಕೆಲವು ತಿಂಗಳ ಹಿಂದೆ ಪಟ್ಟಣದ ವಿಶ್ವನಗರ ಪ್ರದೇಶದಲ್ಲಿ ನೆಲೆಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com