ಹೊಳೆನರಸಿಪುರ: ವಿಚ್ಛೇದನದ ವಿಷಯವಾಗಿ ಕೋರ್ಟ್ ಆವರಣದಲ್ಲೇ ಪತ್ನಿಯ ಹತ್ಯೆ ಮಾಡಿದ ವ್ಯಕ್ತಿ 

ವಿಚ್ಛೇದನದ ಪ್ರಕರಣದಲ್ಲಿ ಕೋರ್ಟ್ ಗೆ ಹಾಜರಾಗಿದ್ದ ವ್ಯಕ್ತಿ ತನ್ನ ಪತ್ನಿಯನ್ನು ಕೋರ್ಟ್ ಆವರಣದಲ್ಲೇ ಇರಿದು ಹತ್ಯೆ ಮಾಡಿರುವ ಘಟನೆ ಹಾಸನದ ಹೊಳೆನರಸಿಪುರದಲ್ಲಿ ನಡೆದಿದೆ. 
ಚೈತ್ರ-ಶಿವಕುಮಾರ್ ದಂಪತಿ
ಚೈತ್ರ-ಶಿವಕುಮಾರ್ ದಂಪತಿ

ಹಾಸನ: ವಿಚ್ಛೇದನದ ಪ್ರಕರಣದಲ್ಲಿ ಕೋರ್ಟ್ ಗೆ ಹಾಜರಾಗಿದ್ದ ವ್ಯಕ್ತಿ ತನ್ನ ಪತ್ನಿಯನ್ನು ಕೋರ್ಟ್ ಆವರಣದಲ್ಲೇ ಇರಿದು ಹತ್ಯೆ ಮಾಡಿರುವ ಘಟನೆ ಹಾಸನದ ಹೊಳೆನರಸಿಪುರದಲ್ಲಿ ನಡೆದಿದೆ. 

ತಾಲೂಕಿನ ತಟ್ಟೆಕೆರೆ ಗ್ರಾಮದ ಶಿವಕುಮಾರ್ ವಿಚ್ಛೇದನದ ಸಂಬಂಧ ಜೆಎಂಎಫ್ ಸಿ ಕೋರ್ಟ್ ಗೆ ಹಾಜರಾಗಿದ್ದ, ಈ ವೇಳೆ ತನ್ನ ಪತ್ನಿ ಚೈತ್ರಾ(24) ಳನ್ನು ಇರಿದು ಹತ್ಯೆ ಮಾಡಿದ್ದಾನೆ ಎಂದು ಎಸ್ ಪಿ ಹರಿರಾಮ್ ಶಂಕರ್ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದಾರೆ.
 
ಕೋರ್ಟ್ ಪೊಲೀಸರು ಚೈತ್ರಾ ಅವರನ್ನು ತಾಲೂಕು ಆಸ್ಪತ್ರೆಗೆ ತಕ್ಷಣವೇ ದಾಖಲಿಸಿದರು, ಆ ಬಳಿಕ ಹಾಸನದ ಹಿಮ್ಸ್ ಆಸ್ಪತ್ರೆಗೆ ಕರೆತರುವ ವೇಳೆಗೆ ಆಕೆ ಮೃತಪಟ್ಟಿದ್ದರು. 

ಶಿವಕುಮಾರ್ ಅವರನ್ನು 5 ವರ್ಷಗಳ ಹಿಂದೆ ವಿವಾಹವಾಗಿದ್ದ ಚೈತ್ರಗೆ ಇಬ್ಬರು ಮಕ್ಕಳಿದ್ದಾರೆ. ಆರೋಪಿ ಆಗಾಗ್ಗೆ ಕೌಟುಂಬಿಕ ವಿಷಯವಾಗಿ ಪತ್ನಿಯೊಂದಿಗೆ ಜಗಳವಾಡುತ್ತಿದ್ದ ಕಾರಣ ಬೇಸತ್ತ ಚೈತ್ರ 2 ವರ್ಷಗಳ ಹಿಂದೆ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿ ಜೀವನಾಂಶ ಕೇಳಿದ್ದರು.  ಸಂಬಂಧಿಕರು ಹಲವು ಬಾರಿ ಕೌಟುಂಬಿಕ ಕಲಹವನ್ನು ಬಗೆಹರಿಸಲು ಯತ್ನಿಸಿದರಾದರೂ ಅದು ಪ್ರಯೋಜನವಾಗಿರಲಿಲ್ಲ. 

ನ್ಯಾಯಾಧೀಶರು ಲೋಕ್ ಅದಾಲತ್ ನಲ್ಲಿ ಪ್ರಕರಣವನ್ನು ಇತ್ಯರ್ಥಗೊಳಿಸುವುದಕ್ಕಾಗಿ ದಂಪತಿಗೆ ಸಮನ್ಸ್ ಕಳಿಸಿದ್ದರು.  ಈ ಘಟನೆ ನಡೆಯುವುದಕ್ಕೂ ಒಂದು ಗಂಟೆ ಮುನ್ನ ನ್ಯಾಯಾಧೀಶರು ಶಿವಕುಮಾರ್ ಹಾಗೂ ಚೈತ್ರ ಜೊತೆ ಮಾತನಾಡಿದ್ದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com